ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅ.2 : ನಾಗತಿಹಳ್ಳಿಯಲ್ಲಿ ಗಾಂಧಿ ಗ್ರಾಮ
ಶಾಲೆ ಆವರಣದ ಸಿಹಿಕನಸು ಬಯಲು ರಂಗಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಾಧ್ಯಮಿಕ, ಪ್ರೌಢ ಶಾಲೆ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಗಾಂಧೀಜಿ ಕುರಿತು ಸ್ಥಳದಲ್ಲಿ ಚಿತ್ರ, ಪದ್ಯ, ಪ್ರಬಂಧ, ನಾಟಕ ರಚನೆ ಮಾಡಬಹುದು. ಶ್ರಮದಾನದಲ್ಲಿ ಭಾಗವಹಿಸಬಹುದು. ಗಣ್ಯ ಲೇಖಕರು, ಗಾಂಧೀವಾದಿಗಳು ಉಪಸ್ಥಿತರಿರುತ್ತಾರೆ. ಪ್ರತಿ ಶಾಲೆಯಿಂದ ಇಬ್ಬರು ಬರಬಹುದು ಎಂದು ಹೇಳಿದ್ದಾರೆ.
ಸಂಪರ್ಕ : ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಸಂಚಾಲಕರು ಗಾಂಧಿ ಗ್ರಾಮ ಕಾರ್ಯಕ್ರಮ. ನಂ. 166, 28 ನೇ ಅಡ್ಡ ರಸ್ತೆ, 17 ನೇ ಮುಖ್ಯ ರಸ್ತೆ, ಬನಶಂಕರಿ 2 ನೇ ಹಂತ, ಬೆಂಗಳೂರು - 560070
Comments
Story first published: Wednesday, September 8, 2010, 16:23 [IST]