ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಕ್ಸಲರು ಕೂಡ ಮಣ್ಣಿನ ಮಕ್ಕಳೇ: ದೇವೇಗೌಡ
ಮನೆ ಕಳೆದುಕೊಂಡ ರೈತರು, ಹಿಂದುಳಿದ ವರ್ಗದವರು ಕೈಲಿ ಆಯುಧ ಹಿಡಿದು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದರೆ ಅದರಲ್ಲಿ ತಪ್ಪೇನಿದೆ.
ಆರ್ಥಿಕ ಪ್ರಗತಿ ಹೆಸರಿನಲ್ಲಿ ಸರ್ಕಾರ ನೀಡುತ್ತಿರುವ ವರದಿ ಸಂಪೂರ್ಣ ಸುಳ್ಳು. ದೇಶದಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರ ನೋವಿನ ಕೂಗು ಸರ್ಕಾರದ ಕಿವಿ ಮುಟ್ಟುತ್ತಿಲ್ಲ. ಎಲ್ಲಾ ಸ್ತರ, ಎಲ್ಲಾ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಹೊಂದಿದಾಗ ಮಾತ್ರ ಆರ್ಥಿಕ ಪ್ರಗತಿ ಸಾಧನೆಯ ವಿಷಯ ಮಾತನಾಡಬೇಕು. ಈ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ದೇವೇಗೌಡ ಕಿಡಿಕಾರಿದ್ದಾರೆ.
ಜನತಾ ಪರಿವಾರವನ್ನು ಮತ್ತೆ ಒಗ್ಗೂಡಿಸುವ ಕನಸು ಹೊತ್ತಿರುವ ದೇವೇಗೌಡ,ಶೋಷಿತ ವರ್ಗದ ದನಿಯಾಗಿ ಕೊನೆಯುಸಿರಿರುವವರೆಗೂ ದುಡಿಯುವುದಾಗಿ ಘೋಷಿಸಿದರು.
Comments
Story first published: Thursday, September 2, 2010, 14:20 [IST]