ಬೆಂಗಳೂರಿನಲ್ಲೊಂದು ವಿಶ್ವ ವ್ಯಾಪಾರ ಕೇಂದ್ರ

ಡಬ್ಲ್ಯೂಟಿಸಿ ಆರಂಭಕ್ಕೆ ಅಗತ್ಯವಾದ ಎಲ್ಲ ಪರವಾನಿಗಿಗಳನ್ನು ಪಡೆಯಲಾಗಿದೆ. ಈ ಕೇಂದ್ರದ ಮೂಲಕ ನಗರದ ವಹಿವಾಟುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲಿದೆ. ಅನೇಕ ವಿದೇಶಿ ಕಂಪನಿಗಳ ಜೊತೆಗೆ ಸ್ವದೇಶಿ ಕಂಪನಿಗಳು ಈ ತಾಣದಲ್ಲಿ ವಹಿವಾಟು ಆರಂಭಿಸಲು ಮಾತುಕತೆ ನಡೆಸಿವೆ ಎಂದು ಕೇಂದ್ರದ ಒಕ್ಕೂಟಗಳ ನಿರ್ದೇಶಕ ರಾಬರ್ಟ್ ಜೆ ಫುಹ್ ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದ ಬ್ರಿಗೇಡ್ ಸಮೂಹ ಕೇಂದ್ರಕ್ಕೆ ಬೇಕಾದ ಮೂಲಸೌಕರ್ಯ ಸೇವೆ ಒದಗಿಸುತ್ತದೆ. ಇಸ್ಕಾನ್ ಹಾಗೂ ಮೆಟ್ರೋ ನಡುವಣ 40 ಎಕರೆ ಜಾಗದಲ್ಲಿ 30 ಅಂತಸ್ತಿನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುತ್ತಿದೆ. 1,000 ಕೋಟಿ ರುಪಾಯಿಗಳ ಬಂಡವಾಳದೊಂದಿಗೆ 10 ಲಕ್ಷ ಚದರ ಅಡಿಯ ಕಟ್ಟಡ ನಿರ್ಮಾಣವಾಗುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಟ್ಟಡ ಸೇವೆಗೆ ಲಭ್ಯವಾಗಲಿದೆ ಎಂದು ಬ್ರಿಗೇಡ್ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕಎಂ ಆರ್ ಜೈಶಂಕರ್ ತಿಳಿಸಿದ್ದಾರೆ.
ಮೂರೂವರೆ ವರ್ಷಗಳ ಹಿಂದೆ ಕಟ್ಟಡ ನಿರ್ಮಾಣ ಆರಂಭಿಸಲಾಗಿದೆ. ರಾಜ್ಯ ಸರಕಾರದಿಂದ ಡಬ್ಲ್ಯೂಟಿಸಿಗೆ ಬೇಕಾಗಿರುವ ಎಲ್ಲ ಬಗೆಯ ಪರವಾನಿಗಿಯನ್ನು ಪಡೆದುಕೊಂಡಿದ್ದೇವೆ ಎಂದು ಜೈಶಂಕರ್ ವಿವರಿಸಿದ್ದಾರೆ.
ಏನಿದು ವಿಶ್ವ ವ್ಯಾಪಾರ ಕೇಂದ್ರ ? : ಸೆಪ್ಟೆಂಬರ್ 11, 2001 ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಭಯೋತ್ಪಾದಕರ ದಾಳಿ ಎಂಬ ಸುದ್ದಿ ವಿಶ್ವದೆಲ್ಲೆಡೆ ಬಿತ್ತರವಾಗುತ್ತಿತ್ತು. ಅಲ್ಲಿಂದ ಅಮೆರಿಕದಲ್ಲಿರುವ ಏಳು ವಿಶ್ವ ವ್ಯಾಪಾರಿ ಕೇಂದ್ರಗಳು ಜನಪ್ರಿಯವಾದವು. ಇಂಥ ವ್ಯಾಪಾರ ಕೇಂದ್ರವನ್ನು ನಿರ್ವಹಿಸುತ್ತಿರುವುದು ವಿಶ್ವ ವ್ಯಾಪಾರ ಒಕ್ಕೂಟ. ಸುಮಾರು 91 ರಾಷ್ಟ್ರಗಳಲ್ಲಿ ಅಸ್ತಿತ್ವ ಹೊಂದಿರುವ ವಿಶ್ವ ವ್ಯಾಪಾರ ಕೇಂದ್ರ 316 ನಗರಗಳಲ್ಲಿ ಚಟುವಟಿಕೆ ನಡೆಸುತ್ತಿದೆ.
ಒಕ್ಕೂಟ 88 ರಾಷ್ಟ್ರಗಳಲ್ಲಿ, 287 ಅಂಗಸಂಸ್ಥೆಗಳನ್ನು ಹೊಂದಿವೆ. ಸುಮಾರು 7,50,000 ಕ್ಕೂ ಹೆಚ್ಚು ಕಂಪನಿಗಳ ಒಕ್ಕೂಟ ಅಧೀನದಲ್ಲಿ ವಹಿವಾಟು ನಡೆಸುತ್ತಿವೆ. ತನ್ನ ಸದಸ್ಯರಿಗೆ ವಿಶ್ವ ಮಟ್ಟದ ವಹಿವಾಟು ನೀಡುವುದು ಒಕ್ಕೂಟದ ಪ್ರಮುಖ ಧ್ಯೇಯ. ಈ ವ್ಯಾಪಾರಿ ತಾಣದಲ್ಲಿ ಮುಖ್ಯವಾಗಿ ಅಂತಾರಾಷ್ಟ್ರೀಯ ಕಂಪನಿಗಳು ಕಂಡುಬರುತ್ತಿವೆ. ನಾನಾ ದೇಶಗಳ ಕಂಪನಿಗಳು ಒಂದೇ ಸೂರಿನಡಿ ನೋಡಲು ಸಿಗುತ್ತವೆ. ಸದಸ್ಯರ ನಡುವೆ ಸಹಕಾರ ಮತ್ತು ಪ್ರೋತ್ಸಾಹ ನೀಡುವುದು ಮುಖ್ಯ ಉದ್ದೇಶ. 24 ಅಂತಾರಾಷ್ಟ್ರೀಯ ನಿರ್ದೇಶಕರ ಮಂಡಳಿಯೊಂದಿಗೆ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ ಎಂದು ಒಕ್ಕೂಟ ಮುಖ್ಯಸ್ಥ ರಾಬರ್ಟ್ ಹೇಳುತ್ತಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications