ಸಾಲ ತೀರಿಸಲು ಹೆತ್ತ ಮಗು ಮಾರಾಟ

ಘಟನೆ ವಿವರ: ಕಂಕನಾಡಿ ಆಸ್ಪತ್ರೆಯಲ್ಲಿ ಜೂ.26 ಕ್ಕೆ ತನ್ನ ಪತ್ನಿ ರೆಹಮತ್ ಹೆಣ್ಣು ಮಗು ಹುಟ್ಟಿದಾಗ, ಎಲ್ಲರಂತೆ ಷಮೀರ್ ಕೂಡಾ ಸಂತೋಷದಿಂದ ಮಗುವನ್ನು ಎತ್ತಿ ಮುದ್ದಾಡಿದ್ದ.ಆಸ್ಪತ್ರೆಯಿಂದ ಡಿಸ್ ಚಾರ್ಚ್ ಆದ ತಕ್ಷಣ ರೆಹಮತ್ ಳನ್ನು ಮಗುವನ್ನು ಕೊಡುವಂತೆ ಷಮೀರ್ ಕೇಳಿದಾಗ, ಆಕೆಗೆ ಏಕೋ ಅನುಮಾನ ಹುಟ್ಟಿ, ತನ್ನ ಬಳಿಯೇ ಇರಲಿ ಎಂದಿದ್ದಾಳೆ.
ಆದರೆ, ಮಗು ಹುಟ್ಟುವುದಕ್ಕೆ ಮುಂಚೆಯೇ ಮಾರಾಟದ ಡೀಲ್ ಮುಗಿಸಿಕೊಂಡಿದ್ದ ಷಮೀರ್, ಒಪ್ಪಂದದ್ದಂತೆ ಮಗುವನ್ನು ನೀಡಲು ಮುಂದಾಗಿದ್ದಾನೆ. ತನ್ನ ಪತ್ನಿ ಬಳಿ ಇದ್ದ ಮಗುವನ್ನು ಕಸಿದುಕೊಂಡು ಕಾಸರಗೋಡಿನ ಅಬ್ದು ಲ್ ಖಾದೀರ್ ಎಂಬುವವನಿಗೆ ಮಾರಾಟ ಮಾಡಿದ್ದಾನೆ.
ಸಿಕ್ಕಿಬಿದ್ದ ಪಾಪಿ ಪಿತ: ಪಣಂಬೂರು ಪೊಲೀಸ್ ಠಾಣೆಯಲ್ಲಿ ಮಗು ಕಳ್ಳತನದ ಸಂಬಂಧ ರಹಮತ್ ದೂರು ನೀಡಿದ್ದಾರೆ. ಕಾರ್ಯ ಪ್ರವೃತ್ತರಾದ ಎಸಿಪಿ ಸೀಮಂತ್ ಕುಮಾರ್ ಅವರಿದ್ದ ಪೊಲೀಸ್ ತಂಡ ಮಗುವಿನ ತಂದೆ ಷಮೀರ್ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ನಂತರ ಪೊಲೀಸರೆದುರು ಬಾಯ್ಬಿಟ್ಟ ಷಮೀರ್, ತನ್ನ ಮಗುವನ್ನು ಮಾರಾಟ ಮಾಡಲು ಬದ್ರುದ್ದೀನ್ ಎಂಬುವನ ಸಹಾಯ ಪಡೆದಿದ್ದೆ. ಅಬ್ದುಲ್ ಖಾದೀರ್ ಇಂದ ನನಗೆ ಮೊದಲ ಮೊತ್ತವಾಗಿ 35 ಸಾವಿರ ಸಿಕ್ಕಿದೆ. ಇನ್ನೂ 50 ಸಾವಿರ ರು ನಂತರ ನೀಡುವ ಭರವಸೆ ನೀಡಿದ್ದ ಎಂದಿದ್ದಾನೆ.
ಕಾಸರಗೋಡಿನ ಗುಂಪಿನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆ. ನಾನು ತುಂಬಾ ಸಾಲ ಮಾಡಿದ್ದೆ. ಅದನ್ನು ತೀರಸಲು ನನಗಿದ್ದ ಮಾರ್ಗ ಇದೊಂದೆ. ಮಗು ಹುಟ್ಟ್ಟುವ ಮೊದಲೇ ಈ ಒಪ್ಪಂದವಾಗಿತ್ತು. ಅದರಂತೆ, ಅವರಿಗೆ ಮಗು ನೀಡಿ, ಹಣ ಪಡೆದೆ ಎಂದಿದ್ದಾನೆ.
ಷಮೀರ್ ಹಾಗೂ ರಹಮಾತ್ ಮದುವೆಯಾಗಿ ಸುಮಾರು 13 ವರ್ಷಗಳು ಕಳೆದಿದ್ದು, ಇದು ಇವರ ಎರಡನೇ ಮಗುವಾಗಿದೆ. ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಭರಿಸಲು ಕೈಯಲ್ಲಿ ಕಾಸಿರಲಿಲ್ಲ ಎಂದು ತಿಳಿದುಬಂದಿದೆ.
ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆ 363-368, 34 ಮತ್ತು 23 ಸೆಕ್ಷನ್ ಗಳ ಅಡಿಯಲ್ಲಿ ಹಾಗೂ Juvenile Justice Act 2000ರ ಅನ್ವಯ ಕೇಸು ದಾಖಲಿಸಲಾಗಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications