ಆಧಾರ್ ಅಸಮರ್ಪಕ, ಆರೆಸ್ಸೆಸ್ ಅಸಮಾಧಾನ

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ ಕಚೇರಿ ಕೇಶವ ಶಿಲ್ಪದಲ್ಲಿ 63ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ರಾಷ್ಟ್ರದ ಎಲ್ಲ ನಾಗರಿಕರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ಜೀ ಭಾಗ್ವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಗಡಿಗಳು ಸುರಕ್ಷಿತವಾಗಿಲ್ಲದ ಕಾರಣ, ನೆರೆ ರಾಷ್ಟ್ರಗಳ ಜನತೆ ಸುಲಭವಾಗಿ ದೇಶದೊಳಗೆ ನುಸುಳಿ ವಾಸಿಸುತ್ತಿದ್ದಾರೆ. ದೇಶದಲ್ಲಿ ಆರು ತಿಂಗಳ ಕಾಲ ವಾಸ ಮಾಡಿರುವ ದಾಖಲೆ ಒದಗಿಸಿದಲ್ಲಿ ನಾಗರಿಕರ ಗುರುತಿನ ಚೀಟಿ ನೀಡುವುದಾಗಿ ಕೇಂದ್ರ ಸರ್ಕಾರದ ಹೇಳಿದೆ.
ಸರ್ಕಾರದ ಈ ಕ್ರಮದಿಂದ ಗಡಿಯೊಳಗೆ ನುಸುಳಿ ಅಕ್ರಮವಾಗಿ ದೇಶದಲ್ಲಿ ವಾಸಿಸುತ್ತಿರುವ ಭಯೋತ್ಪಾದಕ ಕೂಡ ಗುರುತಿನ ಚೀಟಿ ಪಡೆಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದವರು ಆತಂಕ ವ್ಯಕ್ತಪಡಿಸಿದರು.












Click it and Unblock the Notifications