ಕನ್ನಡ ಕಿಂಕರ ಶಿಕಾರಿಪುರ ಹರಿಹರೇಶ್ವರ ಇನ್ನಿಲ್ಲ

ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ ಹಾಗೂ ಅಮೆರಿಕಾದಲ್ಲಿ ನೆಲೆಯಾಗಿರುವ ಪುತ್ರಿಯರಾದ ನಂದಿನಿ ಮತ್ತು ಸುಮನಾ ಅವರನ್ನು ಹರಿಹರೇಶ್ವರ ಅವರು ಅಗಲಿದ್ದಾರೆ.
ಅಮೆರಿಕಾದಲ್ಲಿ 20 ವರ್ಷಗಳ ಕಾಲ ವಾಸವಾಗಿದ್ದ ಅವರು ಆರು ವರ್ಷಗಳ ಹಿಂದಷ್ಟೆ ತವರೂರು ಕರ್ನಾಟಕಕ್ಕೆ ಪತ್ನಿ ಸಮೇತ ಮರಳಿದ್ದರು. ಮೈಸೂರಿನ ಸರಸ್ವತಿಪುರಂನಲ್ಲಿ ವಾಸವಾಗಿದ್ದರು. ಅವರ ಹಠಾತ್ ಅಗಲಿಕೆ ಜಗತ್ತಿನಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳನ್ನು ಶೋಕ ಸಾಗರಕ್ಕೆ ದೂಡಿದೆ.
ಅಮೆರಿಕಾದಲ್ಲಿದ್ದು ಕನ್ನಡಿಗರೇ ನಿತ್ಯ ಕನ್ನಡವೇ ಸತ್ಯ ಎಂದು ಬಾಳಿಬದುಕಿದ್ದ ವಿರಳಲ್ಲಿ ವಿರಳ ಕನ್ನಡಿಗ ಎಂಬ ಗೌರವಕ್ಕೆ ಹರಿಹರೇಶ್ವರ ಅವರು ಪಾತ್ರರಾಗಿದ್ದರು. ಕೆಲಕಾಲ ಅಮೆರಿಕದಲ್ಲಿ 'ಅಮೆರಿಕನ್ನಡ' ಎಂಬ ಪತ್ರಿಕೆಯನ್ನು ನಡೆಸಿದ್ದರು. ಸುಮಾರು ಇಪ್ಪತ್ತು ಕೃತಿಗಳನ್ನು ರಚಿಸಿರುವುದಲ್ಲದೆ ಅಸಂಖ್ಯಾತ ಬರಹಗಾರರಿಗೆ ಪ್ರೋತ್ಸಾಹ, ಮಾರ್ಗದರ್ಶನ ಮಾಡುತ್ತಿದ್ದ ಹರಿ ಕನ್ನಡಿಗರ ಆಸ್ತಿ ಎನಿಸಿದ್ದರು.
2000ನೇ ಇಸವಿಯಲ್ಲಿ ದಟ್ಸ್ ಕನ್ನಡ ಆರಂಭವಾದಾಗ ವಾಹಿನಿಯ ಪ್ರಥಮ ಅಂಕಣ ಹೊಂಬೆಳಕ ಹೊನಲು ನಿಭಾಯಿಸುತ್ತಿದ್ದ ಅವರು ನೂರಾರು ಲೇಖನಗಳನ್ನು ಬರೆದಿದ್ದರು. ಹರಿ ಅವರ ನಿಧನಕ್ಕೆ ದಟ್ಸ್ ಕನ್ನಡ ಸಿಬ್ಬಂದಿ, ಆಡಳಿತ ವರ್ಗ ಅತೀವ ಸಂತಾಪ ವ್ಯಕ್ತಪಡಿಸಿದೆ.
ಹರಿ ಅವರ ಇಚ್ಛೆಯಂತ ಅವರ ದೇಹವನ್ನು ಮೈಸೂರಿನ ಜೆಎಸ್ಎಸ್ ಕಾಲೇಜಿಗೆ ದಾನ ಮಾಡಲಾಗಿದೆ. ಶುಕ್ರವಾರ 2 ಗಂಟೆಯವರೆಗೆ ಅಂತಿಮ ದರ್ಶನಕ್ಕಾಗಿ ಅವರ ದೇಹವನ್ನು ಸರಸ್ವತೀಪುರಂನಲ್ಲಿರುವ ಅವರ ಮನೆಯಲ್ಲಿ ಇಟ್ಟಿರಲಾಗುತ್ತಿದೆ.
ಹಲವು ಹತ್ತು ಪುರಸ್ಕಾರಗಳಿಗೆ ಭಾಜನರಾಗಿದ್ದ ಹರಿ ರಾಜ್ಯೋತ್ಸವ ಗೌರವಕ್ಕೆ ಪಾತ್ರರಾದ ಮೊದಲ ಅಮೆರಿಕನ್ನಡಿಗರಾಗಿದ್ದರು. ದಟ್ಸ್ ಕನ್ನಡ ಅಂತರ್ಜಾಲ ತಾಣದ ಮೊದಲ ಓದುಗ ಹಾಗೂ ಮೊಟ್ಟಮೊದಲ ತಜ್ಞ ಬರಹಗಾರ ಎಂಬ ನಮ್ಮಗಳ ಪ್ರೀತಿಗೆ ಪಾತ್ರರಾದವರು ಶಿಕಾರಿಪುರ ಹರಿಹರೇಶ್ವರ.
ಇಸವಿ 2000ದಲ್ಲಿ ನಮ್ಮ ಪತ್ರಿಕೆ ಅಂತರ್ಜಾಲದಲ್ಲಿ ರಂಗಪ್ರವೇಶ ಮಾಡಿದಾಗ ಜೋಗುಳ ಹಾಡಿ ಬರಮಾಡಿಕೊಂಡವರು ಅವರು. ಒಟ್ಟು ಇಪ್ಪತ್ತೇಳು ವರ್ಷದ ವಿದೇಶ ವಾಸಕ್ಕೆ ಗುಡ್ ಬೈ ಹೇಳಿ ಮೈಸೂರಿಗೆ ಹಿಂತಿರುಗಿದ ಸಂದರ್ಭದಲ್ಲಿ ಕೊಂಚಕಾಲ ಮಧ್ಯಂತರ ಪಡೆದುದ ಹೊರತುಪಡಿಸಿದರೆ ಅವರ ಲೇಖನಿಗೂ ದಟ್ಸ್ ಕನ್ನಡ ವಾಚಕವರ್ಗಕ್ಕೂ ಬಿಡಿಸಲಾಗದ ನಂಟು. ನಾನಿನ್ನು ಹೋಗಿಬರಲೇ?
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications