ಬಾಡೂಟ ತಿಂದು ಮಲಗುವ ವೇದಿಕೆಯಲ್ಲ: ಈಶ್ವರಪ್ಪ

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಧಾನಸೌಧ ಇರುವುದು ನಾಡಿನ ಜನತೆಯ ಸಂಕಷ್ಟಕ್ಕೆ ಪರಿಹಾರ ನೀಡಲೇ ಹೊರತು, ಬಾಡೂಟ ತಿಂದು ಮಜಾ ಮಾಡಲು ಅಲ್ಲ ಎಂದಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಅಹೋರಾತ್ರಿ ಧರಣಿ ನಡೆಸುತ್ತಿರುವುದನ್ನು ಅವರು ಖಂಡಿಸಿದರು.
ಈ ವಿಚಾರ ಕುರಿತು ಸದನದಲ್ಲಿ ಸುದೀರ್ಘ ಚರ್ಚೆ ನಡೆದು ಸರ್ಕಾರ ಉತ್ತರವನ್ನೂ ನೀಡಿದ ನಂತರ ಧರಣಿ ಕೈಗೊಂಡಿರುವ ಪ್ರತಿಪಕ್ಷಗಳ ನಿರ್ಧಾರವೇ ಸರಿಯಲ್ಲ ಎಂದರು. ನಾಡಿನ ಸಮಸ್ಯೆ ಪರಿಹರಿಸಬೇಕೆಂಬ ನಿಜವಾದ ಕಾಳಜಿ ಇದ್ದರೆ ಒಣ ಪ್ರತಿಷ್ಠೆ ಬಿಟ್ಟು ಸದನದ ಕಲಾಪದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸಲಹೆ-ಸೂಚನೆ ನೀಡಲಿ.
ಅದನ್ನು ಬಿಟ್ಟು ಪ್ರತಿಭಟನೆಯ ಹೆಸರಿನಲ್ಲಿ ವ್ಯರ್ಥವಾಗಿ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಲೋಕಾಯುಕ್ತ ತನಿಖೆಗೆ ಸಿಎಂ ಅವರು ಸೂಚಿಸಿರುವಾಗ ಸಿಬಿಐ ತನಿಖೆ ಯಾಕೆ ಎಂದು ಈಶ್ವರಪ್ಪ ಪ್ರಶ್ನಿಸಿದರು.












Click it and Unblock the Notifications