ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಾಯುಕ್ತರೆ ಟೀಕೆಗಳಿಗೆ ಕುಗ್ಗಬೇಡಿ : ದೇವೇಗೌಡ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ನೀಡಿರುವ ಹೇಳಿಕೆ ನಿಮಗೆ ನೋವುಂಟು ಮಾಡಿದೆ ಎಂಬುದು ಗೊತ್ತಿದೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದು ಬೇಡ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಮನವಿ ಮಾಡಿರುವುದಾಗಿ ಗೌಡರು ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರ ಮನವಿ ಮೇರೆಗೆ ರಾಜೀನಾಮೆ ಹಿಂದಕ್ಕೆ ಪಡೆದುಕೊಂಡೇ ಎಂದು ಲೋಕಾಯುಕ್ತರು ನೀಡಿರುವ ಹೇಳಿಕೆಯಲ್ಲಿ ತಪ್ಪಿಲ್ಲ. ಭ್ರಷ್ಟಾಚಾರದ ವಿರುದ್ದದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು. ಹಿರಿಯರಾದ ಆಡ್ವಾಣಿ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಹಾಗೆಯೇ ಲೋಕಾಯುಕ್ತರು ಸಹ ಗೌರವಭಾವದಿಂದ ಮಾತನಾಡಿದ್ದಾರೆ. ಅದರಲ್ಲಿ ತಪ್ಪು ಹುಡುಕುವುದು ಬೇಡ ಎಂದು ಗೌಡರು ಅಭಿಪ್ರಾಯಪಟ್ಟಿದ್ದಾರೆ.
Comments
ಸಂತೋಷ್ ಹೆಗ್ಡೆ ದೇವೇಗೌಡ ಲೋಕಾಯುಕ್ತ ಭ್ರಷ್ಟಾಚಾರ ಎಲ್ ಕೆ ಅಡ್ವಾಣಿ ಯಡಿಯೂರಪ್ಪ ಗಣಿಗಾರಿಕೆ santosh hegde deve gowda lokayukta lk advani yediyurappa mining
Story first published: Tuesday, July 6, 2010, 13:09 [IST]