ಫೀಫಾ ವಿಶ್ವಕಪ್ 2010 ಯಾರು ಗೆಲ್ಲುತ್ತಾರೆ?
ಜೋಹಾನ್ಸ್ ಬರ್ಗ್, ಜು.5:ಫೀಫಾ ವಿಶ್ವಕಪ್ 2010 ಉಪಾಂತ್ಯ ಹಂತ ತಲುಪಿದ್ದು, ಅಭಿಮಾನಿಗಳು ಕಾತುರದಿಂದ ಮುಂದಿನ ಪಂದ್ಯಗಳನ್ನು ಎದುರು ನೋಡುತ್ತಿದ್ದಾರೆ. ಈಗ ಎಲ್ಲರೂಗೂ ವಿಶ್ವಕಪ್ ಗೆಲ್ಲುವ ತಂಡ ಯಾವುದು ಎಂಬ ಚರ್ಚೆಯಲ್ಲಿ ಮುಳುಗಿದ್ದಾರೆ.
ಬುಕ್ಕಿಗಳ ಫೇವರಿಟ್ ತಂಡಗಳಲ್ಲಿ ಸ್ಪೇನ್ ಹಾಗು ಜರ್ಮನಿ ಉಳಿದಿದ್ದು, ಅರ್ಜೆಂಟೀನಾ ಹಾಗೂ ಇಂಗ್ಲೆಂಡ್ ಮನೆ ಸೇರಿವೆ. ಜರ್ಮನಿಯ ಅದ್ಭುತ ಪ್ರದರ್ಶನದ ನಡುವೆಯೂ ಬುಕ್ಕಿಗಳು ಈಗಲೂ ಸ್ಪೇನ್ ಪ್ರಶಸ್ತಿ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಆದರೆ, ಫುಟ್ಬಾಲ್ ಪಂಡಿತರ ಪ್ರಕಾರ ಜರ್ಮನಿ ಫೈನಲ್ ತಲುಪುವುದು ಗ್ಯಾರಂಟಿ. ಹಾಲೆಂಡ್ ಅನ್ನು ಸೋಲಿಸಿ ಪ್ರಶಸ್ತಿಗೆ ಜರ್ಮನ್ನರು ಮುತ್ತಿಕ್ಕಲಿದ್ದಾರೆ ಎಂದಿದ್ದಾರೆ. ಆದರೆ, ದಕ್ಷಿಣ ಅಮೆರಿಕದ ಏಕೈಕ ತಂಡವಾಗಿರುವ ಉರುಗ್ವೆ ಹಿಂದೆ ಬ್ರೆಜಿಲ್ ಹಾಗೂ ಅರ್ಜೆಂಟೀನಾ ಅಭಿಮಾನಿಗಳ ಬೆಂಬಲ ಕೂಡಾ ಸಿಗುವ ಸಾಧ್ಯತೆಯಿದ್ದು, ಹಾಲೆಂಡ್ ಅನ್ನು ಮಣಿಸುವ ನಿರೀಕ್ಷೆಯಲ್ಲಿದ್ದಾರೆ.ಯಾರೂ ಉರುಗ್ವೆ ಫೈನಲ್ ಪ್ರವೇಶದ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಹಾಲೆಂಡ್ ಅನ್ನು ಬಗ್ಗುಬಡಿಯುವ ಎಲ್ಲಾ ಸಾಮರ್ಥ್ಯ ಉರುಗ್ವೆಗಿದೆ.
ಜರ್ಮನಿಗೆ ಹೋಲಿಸಿದರೆ ಮೇಲ್ನೋಟ ಸ್ಪೇನ್ ಬಲಿಷ್ಠವಾದರೂ ಪ್ರಮುಖ ಪಂದ್ಯಗಳಲ್ಲಿ ಸ್ಪೇನ್ ಯಶ ಸಾಧಿಸಿದ ದಾಖಲೆ ಹೊಂದಿದೆ. ಲೀಗ್ ಹಂತದಲ್ಲಿ ಜರ್ಮನ್ನರು ದುರ್ಲಬ ಸೆರ್ಬಿಯಾ ವಿರುದ್ಧ ಸೋಲುಂಡಿದ್ದರು. ಹಾಗೂ ಸ್ಪೇನ್ ಕೂಡಾ ಸ್ವಿಡ್ಜರ್ ಲ್ಯಾಂಡ್ ವಿರುದ್ಧ ಸೋತಿದೆ.
ಇತ್ತೀಚಿನ ಪ್ರದರ್ಶನವನ್ನು ಗಮನಿಸಿದರೆ, ಒಂದುವೇಳೆ ಸೆಮೀಸ್ ನಲ್ಲಿ ಸ್ಪೇನ್ ಗೆದ್ದರೆ, ಪ್ರಶಸ್ತಿ ಸ್ಪೇನ್ ಪಾಲಾಗುವುದಂತೂ ಸತ್ಯ. ಆದರೆ, ಹಾಲೆಂಡ್ ಅನ್ನು ನಂಬುವಂತಿಲ್ಲ. ಒಟ್ಟಿನಲ್ಲಿ ಕುತೂಹಲಕಾರಿ ಪಂದ್ಯಗಳ ನಿರೀಕ್ಷೆ ಎಲ್ಲರಲ್ಲೂ ಮನೆ ಮಾಡಿದೆ.
ಮೊದಲ ಸೆಮಿಫೈನಲ್: ಉರುಗ್ವೆ Vs ನೆದರ್ಲಾಂಡ್ ಜು.7 (ಮಧ್ಯರಾತ್ರಿ 12 ಗಂಟೆ), ಡರ್ಬನ್
ಎರಡನೇ ಸೆಮಿಫೈನಲ್: ಜರ್ಮನಿ Vs ಸ್ಪೇನ್, ಜು.8(ಮಧ್ಯರಾತ್ರಿ 12 ಗಂಟೆ) ಕೇಪ್ ಟೌನ್
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications