ವಿರಾಜಪೇಟೆಯಲ್ಲಿ ಟೈಂ ಹೋಗುವುದೇ ಗೊತ್ತಾಗುವುದಿಲ್ಲ!

ಈಗ ಅನಾಥವಾಗಿ ನಿಂತಿರುವ ಈ ಸ್ಮಾರಕದತ್ತ ಯಾರು ಕೂಡ ಗಮನಹರಿಸುವಂತೆ ಕಾಣುತ್ತಿಲ್ಲ. ಇದರ ಪಕ್ಕದಲ್ಲಿಯೇ, ಶಾಸಕರು, ಸಚಿವರು, ಅಧಿಕಾರಿಗಳು ದಿನನಿತ್ಯ ಹಾದು ಹೋಗುತ್ತಾರೆ ಆದರೂ ಯಾರೊಬ್ಬರ ಗಮನಕ್ಕೆ ಬಾರದಿರುವುದು ಂಬಂಧಪಟ್ಟವರು ನಿರ್ಲಕ್ಷ್ಯ ತೋರಿಸುತ್ತದೆ.
ಇದು ಕೇಲ ಸಮಯ ಬಿಂಬಿಸುವ ಗಡಿಯಾರವಲ್ಲ. ಕೊಡಗಿನಲ್ಲಿರುವ ಕೆಲವೇ ಕೆಲವು ಸ್ಮಾರಕಗಳಲ್ಲಿ ಇದೂ ಒಂದಾಗಿದೆ. ಇದನ್ನು ದೇವಣಗೇರಿಯ ಸುಬೇದಾರ್ ರಾವ್ ಬಹುದ್ದೂರ್ ಮುಕ್ಕಾಟಿರ ಅಯ್ಯಪ್ಪರವರು ಕೊಲೋನೇಷನ್ ದರ್ಬಾರ್ನಲ್ಲಿ ನಡೆದ ಜಾರ್ಜ್ ದೊರೆಯ ಅಧಿಕಾರ ಸ್ವೀಕಾರ ಸಮಾರಂಭದ ಸವಿನೆನಪಿಗಾಗಿ 1911 ರಲ್ಲಿ ನಿರ್ಮಿಸಿದರೆಂದು ಇತಿಹಾಸ ಹೇಳುತ್ತದೆ.
ಎರಡು ಅಂತಸ್ತಿನ ಗೋಪುರದಲ್ಲಿ ಗಡಿಯಾರವನ್ನು ಅಳವಡಿಸಲಾಗಿದೆ. ಇದು ಬೇರೆಡೆಗಳಲ್ಲಿರುವ ಗಡಿಯಾರ ಕಂಬಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಭಿನ್ನವಾಗಿ ಗೋಚರಿಸುತ್ತದೆ. ವೀರಾಜಪೇಟೆಯಲ್ಲಿ ಏನೇ ಕಾರ್ಯಕ್ರಮ ಉತ್ಸವ, ಮೆರವಣಿಗೆ ನಡೆದರೂ ಅದು ಈ ಗಡಿಯಾರ ಕಂಬವನ್ನು ಹಾದು ಹೋಗಲೇ ಬೇಕು. ಇದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.
ಮಳೆಗಾಳಿಗೆ ಸಿಲುಕಿ ಕಳೆಗುಂದಿದ್ದ ಸ್ಮಾರಕಕ್ಕೆ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಿ.ಆರ್. ವಿಜಯಚಂದ್ರರವರ ಕಾಲದಲ್ಲಿ ಸುಣ್ಣ ಬಣ್ಣ ಬಳಿಯಲಾಗಿತ್ತು. ಆ ನಂತರ ಫರೂಕ್ ರಹೀಂ ಅಧ್ಯಕ್ಷರಾಗಿದ್ದ ಕಾಲದಲ್ಲಿ ಹಳೆಯ ಗಡಿಯಾರ ತೆಗೆದು ನೂತನ ಟೈಟಾನ್ ಗಡಿಯಾರ ಅಳವಡಿಸಲಾಯಿತು. ಕಾಂತಿಬೆಳ್ಯಪ್ಪ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಗಡಿಯಾರ ಕೆಟ್ಟು ಹೋಗಿತ್ತಾದರೂ ಅದನ್ನು ದುರಸ್ತಿ ಮಾಡಿಸಿದ್ದರು.
ಈಗ ಮತ್ತೆ ಕೆಟ್ಟು ಹೋಗಿ ಆರು ತಿಂಗಳಾಗಿದೆ ಇನ್ನೂ ಕೂಡ ಸಂಬಂಧಿಸಿದವರು ಇತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಕೂಡಲೇ ಗಡಿಯಾರವನ್ನು ದುರಸ್ತಿ ಮಾಡಿ ಆ ಮೂಲಕ ಐತಿಹಾಸಿಕ ಸ್ಮಾರಕಕ್ಕೆ ಗೌರವ ನೀಡಲಿ ಎನ್ನುವುದು ಸಾರ್ವಜನಿಕರ ಮನವಿ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications