ರಾಘವೇಶ್ವರ ಸ್ವಾಮೀಜಿ ಸಿಡಿ. ನಾಲ್ವರು ಶರಣಾಗತಿ

ಶರಣಾದ ಆರೋಪಿಗಳಲ್ಲಿ ಗಣೇಶ ವಾಸುದೇವ ಜೋಗಳೇಕರ ಸೋಮನಾಥ ವಾಸುದೇವ ಜೋಗಳೆಕರ ಅವರನ್ನು ಜೂ.19 ರವರೆಗೆ ಪೊಲೀಸ್ ಕಸ್ಟಡಿಯಲ್ಲಿರಿಸಿಕೊಳ್ಳಲು ಕೋರ್ಟ್ ಆದೇಶಿಸಿದೆ. ಉಳಿದಿಬ್ಬರು ಆರೋಪಿಗಳಾದ ಪಣಿರಾಜ ಗೋಪಿ ಹಾಗೂ ಕೃಷ್ಣ ಯೋಗ ಭಟ್ ಅವರಿಗೆ ಜೂ.30 ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಿರೀಕ್ಷಣಾ ಜಾಮೀನು ತಿರಸ್ಕಾರವಾದ ಹಿನ್ನೆಲೆಯಲ್ಲಿ ಆರೋಪಿಗಳು ನ್ಯಾಯಲಯಕ್ಕೆ ಶರಣರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ13 ಜನರನ್ನು ಬಂಧಿಸಲಾಗಿದೆ. ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನಕಲಿ ಸಿಡಿ ಸೃಷ್ಟಿಸಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.












Click it and Unblock the Notifications