ರೋಚಕತೆ, ತಮಾಷೆ ಮತ್ತು ಅನಿರೀಕ್ಷಿತ ಫಲಿತಾಂಶ!

ಭಾರತೀಯ ಕಾಲಮಾನದನುಸಾರ ಇಂದು 00-00 ಗಂಟೆಗೆ ನಡೆದ ಎರಡನೇ ಪಂದ್ಯದಲ್ಲಿ 9ನೇ (ವಿಶ್ವ)ಶ್ರೇಯಾಂಕಿತ ಫ್ರಾನ್ಸ್ ತಂಡವು 16ನೇ (ವಿಶ್ವ)ಶ್ರೇಯಾಂಕಿತ ಉರುಗ್ವೆ ತಂಡವನ್ನು ಸೋಲಿಸುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪಂದ್ಯವು ಗೋಲುರಹಿತ ಡ್ರಾ ಆಗಿ ಪರಿಸಮಾಪ್ತಿ ಹೊಂದಿತು.
ಮೊದಲ ಪಂದ್ಯದ ವರದಿಯನ್ನು ಇಂದಿನ ಪತ್ರಿಕೆಗಳಲ್ಲಿ ನೀವು ಓದುತ್ತೀರಿ. ಆದ್ದರಿಂದ ಎರಡನೆಯ ಪಂದ್ಯದ ಬಗ್ಗೆ ಮಾತ್ರ ಇಲ್ಲಿ ಬರೆಯುತ್ತೇನೆ. ಫ್ರಾನ್ಸ್-ಉರುಗ್ವೆ ನಡುವಣ ಈ ಪಂದ್ಯವು ಸಮಬಲದಿಂದ ಕೂಡಿದ್ದು ಹಲವು ರೋಚಕ ಸನ್ನಿವೇಶಗಳನ್ನು ಹಾಗೂ ತಮಾಷೆ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ದಯಪಾಲಿಸಿತು.
ರೋಚಕತೆ-ತಮಾಷೆ
ಆಟದುದ್ದಕ್ಕೂ ಎದುರಾಳಿಗಳನ್ನು ಕೆಡೆಯುವುದು, ರೆಫ್ರಿಯೊಡನೆ ಕ್ಯಾತೆ ತೆಗೆಯುವುದು ನಡೆದೇ ಇತ್ತು. ಪರಿಣಾಮ, ರೆಫ್ರಿಯಿಂದ ಹಳದಿ ಕಾರ್ಡ್ ಶಿಕ್ಷೆ. ಉರುಗ್ವೆ ತಂಡದ ಆಟಗಾರನೊಬ್ಬ ಎರಡು ಸಲ ಹಳದಿ ಕಾರ್ಡ್ ಶಿಕ್ಷೆಗೆ ಗುರಿಯಾದುದರಿಂದಾಗಿ ಕೆಂಪು ಕಾರ್ಡ್ ತೋರಿಸಲ್ಪಟ್ಟು ಮೈದಾನದಿಂದ ಹೊರನಡೆಯಬೇಕಾಯಿತು. ಫ್ರಾನ್ಸ್ನ ಪ್ರಮುಖ ಆಟಗಾರ ಥಿಯರಿ ಹೆನ್ರಿಯನ್ನು ಕಣಕ್ಕಿಳಿಸಿದ್ದು ಪಂದ್ಯ ಮುಗಿಯಲು ಕೇವಲ 20 ನಿಮಿಷಗಳಿದ್ದಾಗ! ಆತನನ್ನು ಮೊದಲೇ ಕಣಕ್ಕಿಳಿಸಿದ್ದಲ್ಲಿ ಫ್ರಾನ್ಸ್ ಗೆಲ್ಲುತ್ತಿತ್ತೇನೋ.
ಕೊನೆಯ ಹತ್ತು ನಿಮಿಷ ಕಾಲ ಉರುಗ್ವೆ ತಂಡದಲ್ಲಿ ಕೆಂಪು ಕಾರ್ಡಿನಿಂದಾಗಿ ಒಬ್ಬ ಆಟಗಾರ ಕಡಿಮೆಯಿದ್ದರೂ ಅದರ ಲಾಭವನ್ನು ಫ್ರಾನ್ಸ್ ತಂಡ ಪಡೆಯಲು ವಿಫಲವಾಯಿತು.
ಪಂದ್ಯ ನಡೆಯುತ್ತಿದ್ದಾಗ ಮೈದಾನದೊಳಕ್ಕೆ ಎರಡು ಗಾಳಿತುಂಬಿದ ಬಲೂನುಗಳು ಬಂದುಬಿದ್ದವು! ರೆಫ್ರಿಯ ಆದೇಶದಮೇರೆಗೆ ಅವನ್ನು ಆಟಗಾರನೊಬ್ಬ ಕಾಲಿನಿಂದ ಚುಚ್ಚಿ ಒಡೆದ. ಮೈದಾನದ ಸೀಮಾರೇಖೆಯ ಜಸ್ಟ್ ಹೊರಗೆ ಕೆಲವು ಉಬ್ಬಿದ ಬಲೂನುಗಳು ನೆಲದಮೇಲೆ ಹರಿದಾಡುತ್ತಿದ್ದವು!
ಜಾರಿಬಿದ್ದ ಜಾಣ
ಆಟ ನಡೆಯುವಾಗ ಆಟಗಾರರು ಕಾಲುಜಾರಿ ಬೀಳುವುದು ಸಾಮಾನ್ಯ. ಆದರೆ ಈ ಪಂದ್ಯದಲ್ಲಿ ರೆಫ್ರಿಯೇ ಜಾರಿಬಿದ್ದ ಘಟನೆ ನಡೆಯಿತು! ಓಟದ ದಿಕ್ಕು ಬದಲಾಯಿಸುವಾಗ ಜಾರಿಬಿದ್ದ ರೆಫ್ರಿ ಮರುಗಳಿಗೆಯೇ ಚೇತರಿಸಿಕೊಂಡು ಮೇಲೆದ್ದ.
ಮುಂದೇನು?
'ಎ' ಗುಂಪಿನ ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಮೆಕ್ಸಿಕೊ ಇವೆರಡೂ ತಂಡಗಳೂ ಮೊದಲ ಪಂದ್ಯಗಳ ಅಂಕಗಳನ್ನು ದುರ್ಬಲ ತಂಡಗಳೊಡನೆ ಸಮನಾಗಿ ಹಂಚಿಕೊಂಡಿರುವುದರಿಂದ ಇವು ನಾಕೌಟ್ ಹಂತ ಪ್ರವೇಶಿಸುವುದೀಗ ಅಷ್ಟೊಂದು ಸುಲಭವೇನಲ್ಲ. ಈ ಕಾರಣದಿಂದಾಗಿ ಇವುಗಳ ಮುಂದಿನ ಪಂದ್ಯಗಳು ಕುತೂಹಲಕರ.
ಇಂದು ನಡೆಯುವ ಎರಡು ಪಂದ್ಯಗಳ ಪೈಕಿ ಅರ್ಜೆಂಟೀನಾ-ನೈಜೀರಿಯಾ ನಡುವಿನ ಪಂದ್ಯ ಮತ್ತು ನಾಳೆ (ಇಂದು ರಾತ್ರಿ) 00-00 ಗಂಟೆಗೆ ನಡೆಯುವ ಇಂಗ್ಲೆಂಡ್-ಯುಎಸ್ಎ ನಡುವಿನ ಪಂದ್ಯ ಇವೆರಡೂ ತೀವ್ರ ಹಣಾಹಣಿಯ ಪಂದ್ಯಗಳಾಗುವ ನಿರೀಕ್ಷೆಯಿದೆ. ಎರಡರ ವೀಕ್ಷಣೆಯನ್ನೂ ತಪ್ಪಿಸಿಕೊಳ್ಳಬೇಡಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications