Get Updates
Get notified of breaking news, exclusive insights, and must-see stories!

ದೇಶದ 11ನೇ ಅತಿದೊಡ್ಡ ವಿಮಾನ ದುರಂತವಿದು

AI Crash is 11th major crash in India
ನವದೆಹಲಿ, ಮೇ.22: ಮಂಗಳೂರಿನಲ್ಲಿ ಶನಿವಾರ ಮುಂಜಾನೆ ನಡೆದ ದುರಂತದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ 160 ಮಂದಿಯನ್ನು ಬಲಿತೆಗೆದುಕೊಂಡಿದೆ. ಇತಿಹಾಸದ ಪುಟಗಳನ್ನು ಅವಲೋಕಿಸಿದರೆ, 1962ರಿಂದ ನಡೆದ ಏರ್ ಇಂಡಿಯಾ ವಿಮಾನ ದುರಂತಗಳಲ್ಲಿ ಇಂದು ಮಂಗಳೂರಿನಲ್ಲಿ ನಡೆದ ದುರಂತ 11ನೆಯ ಅತಿದೊಡ್ಡ ದುರಂತವಾಗಿದೆ. ದೇಶದಲ್ಲಿ ನಡೆದ ಭೀಕರ ವಿಮಾನ ದುರಂತಗಳ ಪಟ್ಟಿ ಹೀಗಿದೆ...

1962, ಜುಲೈ 7: ಸಿಡ್ನಿಯಿಂದ ಬರುತ್ತಿದ್ದ ಅಲಿಟಾಲಿಯಾ 771 ವಿಮಾನ ಮುಂಬೈನಿಂದ ಈಶಾನ್ಯ ದಿಕ್ಕಿನಲ್ಲಿ 84 ಕಿ.ಮೀ ದೂರದ ಬೆಟ್ಟಕ್ಕೆ ಅಪ್ಪಳಿಸಿ ದುರಂತಕ್ಕೀಡಾಗಿತ್ತು. ಈ ವಿಮಾನ ದುರಂತದಲ್ಲಿ ಒಟ್ಟು 94 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.

1978, ಜನವರಿ 1: ದುಬೈಗೆ ಹೊರಟಿದ್ದ ಏರ್ ಇಂಡಿಯಾ 855 ವಿಮಾನ ಮುಂಬೈನ ಬಾಂದ್ರಾ ಸಮೀಪದಲ್ಲಿ ಆಘಾತಕ್ಕೀಡಾಗಿತ್ತು. ಈ ವಿಮಾನ ದುರಂತದಲ್ಲಿ ಒಟ್ಟು 213 ಮಂದಿ ಸಾವಪ್ಪಿದ್ದರು.

1982, ಜೂನ್ 21: ಕೌಲಾಲಂಪುರದಿಂದ ಚೆನ್ನೈಗೆ ಮರಳುತ್ತಿದ್ದ ಏರ್ ಇಂಡಿಯಾ 403 ವಿಮಾನ ಮುಂಬೈನ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿತ್ತು. ಈ ದುರಂತದಲ್ಲಿ 12 ಮಂದಿ ವಿಮಾನ ಸಿಬ್ಬಂದಿಯಲ್ಲಿ ಇಬ್ಬರನ್ನು ಹಾಗೂ ಒಟ್ಟು 99 ಮಂದಿ ಪ್ರಯಾಣಿಕರಲ್ಲಿ 15 ಮಂದಿಯನ್ನು ಆಹುತಿ ತೆಗೆದುಕೊಂಡಿತ್ತು.

1985, ಜೂನ್ 23: ಮಾಂಟ್ರಿಯಲ್ ನಿಂದ ಲಂಡನ್ ಹಾಗೂ ದೆಹಲಿ ಮೂಲಕ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ 182 ವಿಮಾನ ಐರಿಷ್ ವಾಯುನೆಲೆಯಲ್ಲಿ ಸ್ಫೋಟಗೊಂಡ ಪರಿಣಾಮ 329 ಮಂದಿ ದಾರುಣ ಸಾವಪ್ಪಿದ್ದರು.

1988, ಅಕ್ಟೋಬರ್ 19: ಮುಂಬೈನಿಂದ ಅಹಮದಾಬಾದ್ ಗೆ ತೆರಳುತ್ತಿದ್ದ ಏರ್ ಇಂಡಿಯಾ 113 ವಿಮಾನ ಅಪಘಾತಕ್ಕೀಡಾಗಿ ಅದರಲ್ಲಿದ್ದ 130 ಮಂದಿ ಸುಟ್ಟು ಕರಕಲಾಗಿದ್ದರು.

1990, ಫೆಬ್ರವರಿ 14: ಮುಂಬೈನಿಂದ ಬೆಂಗಳೂರು ಹೊರ‍ಟಿದ್ದ ಇಂಡಿಯನ್ ಏರ್ ಲೈನ್ಸ್ ನ 605 ವಿಮಾನ ಮಾರ್ಗಮಧ್ಯದಲ್ಲೆ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 92 ಮಂದಿ ಮೃತಪಟ್ಟಿದ್ದರು. ಪವಾಡಸದೃಶ ರೀತಿಯಲ್ಲಿ 54 ಜನ ಬದುಕುಳಿದಿದ್ದರು.

1991, ಆಗಸ್ಟ್ 16: ಕೋಲ್ಕತ್ತಾದಿಂದ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ನ 257 ವಿಮಾನ ಇಂಫಾಲ್ ನಿಂದ ನೈಋತ್ಯ ದಿಕ್ಕಿನಲ್ಲಿ 40 ಕಿ.ಮೀ ದೂರದಲ್ಲಿರುವ ಬೆಟ್ಟಕ್ಕೆ ಅಪ್ಪಳಿಸಿ ವಿಮಾನದಲ್ಲಿದ್ದ ಎಲ್ಲಾ 69 ಮಂದಿಯನ್ನು ಬಲಿತೆಗೆದುಕೊಂಡಿತ್ತು.

1993, ಏಪ್ರಿಲ್ 26:
ಔರಂಗಾಬಾದ್ ನಲ್ಲಿ ಟೇಕಾಫ್ ಆಗುವ ಸಮಯದಲ್ಲಿ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಂಡಿಯನ್ ಏರ್ ಲೈನ್ಸ್ ನ 491 ವಿಮಾನ ದುರಂತಕ್ಕೀಡಾಗಿ 63 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಈ ದುರಂತದಲ್ಲಿ ಐದು ಮಂದಿ ಬದುಕುಳಿದಿದ್ದರು.

1996, ನವೆಂಬರ್12: ಸೌದಿ ಅರೇಬಿಯಾದ 763 ವಿಮಾನ ಹಾಗೂ ಕಜಕಿಸ್ತಾನದ 1907 ವಿಮಾನ ಆಕಾಶದಲ್ಲೇ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ದುರಂತಕ್ಕೀಡಾಗಿತ್ತು. ಈ ದುರಂತ ದೆಹಲಿ ಬಳಿಯ ಚಕ್ರಿ ದಾದ್ರಿ ಹಳ್ಳಿಯ ಬಳಿ ನಡೆದಿತ್ತು. ದುರಂತದಲ್ಲಿ 349 ಮಂದಿ ಸಾವಪ್ಪಿದ್ದರು.

2000, ಜುಲೈ 17:
ಅಲಯನ್ಸ್ ನ ಸಿಡಿ 7412 ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ 60 ಮಂದಿ ಮೃತಪಟ್ಟಿದ್ದರು.

* ಬಜ್ಪೆಯಲ್ಲಿ ನಕರಸದೃಶ ವಾತಾವರಣ
* ವಿಮಾನ ಅಪಘಾತ; ಮಳೆಯ ನಡುವೆ ರಕ್ಷಣಾ ಕಾರ್ಯ
* ಅಪಘಾತಕ್ಕೀಡಾದ ವಿಮಾನ ಪೈಲಟ್ ಝೆಡ್ ಗ್ಲೂಸಿಯಾ

ವಿಡಿಯೋ
* ವಿಡಿಯೋ : ಬೆಂಕಿ ಉಂಡೆಯಂತಾದ ವಿಮಾನ
* ವಿಡಿಯೋ : ಪುಟ್ಟ ರನ್ ವೇ ಜಿಗಿದ ಏರ್ ಇಂಡಿಯಾ ವಿಮಾನ
* ವಿಡಿಯೋ : ದುರಂತಕ್ಕೆ ಪೈಲಟ್ ತಪ್ಪು ಕಾರಣ?
* ವಿಡಿಯೋ : ಮಂಗಳೂರು ವಿಮಾನ ದುರಂತದಲ್ಲಿ 160 ಸಾವು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+