ತಿರುಪತಿ ಏಕೆ ? ಬೆಂಗ್ಳೂರಲ್ಲೇ ಬಾಲಾಜಿ

ಏಕೆಂದರೆ, ತಿರುಮಲ ತಿರುಪತಿ ದೇವಸ್ಥಾನ ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ಯಥಾವತ್ತಾಗಿ ರೂಪುಗೊಂಡಿದ್ದು, ಮೇ 23 ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ತಿರುಪತಿಗೆ ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ದೇವಸ್ಥಾನದ ಕೇಂದ್ರ ಆರಂಭಿಸುವ ಚಿಂತನೆಯನ್ನು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಕೈಗೊಂಡ ಫಲವೇ ಈ ದೇವಸ್ಥಾನ ನಿರ್ಮಾಣವಾಗಲು ಸಾಧ್ಯವಾಗಿದೆ.
ಚೆನ್ನೈನಲ್ಲಿ ಇದೇ ರೀತಿಯ ಕೇಂದ್ರ ಇದ್ದು, ದೇಶದ ಮೂರನೇ ಕೇಂದ್ರ ಬೆಂಗಳೂರಿನದ್ದಾಗಲಿದೆ ಎಂದು ತಿರುಮಲ ಟ್ರಸ್ಟ್ ನ ಸ್ಥಳೀಯ ಸಲಹೆ ಸಮಿತಿ ಅಧ್ಯಕ್ಷ ಪಿ ಶಾಮರಾಜು ತಿಳಿಸಿದ್ದಾರೆ.












Click it and Unblock the Notifications