ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ಏಕೆ ? ಬೆಂಗ್ಳೂರಲ್ಲೇ ಬಾಲಾಜಿ

By Mrutyunjaya Kalmat
|
Google Oneindia Kannada News

Lord Venkateshwara
ಬೆಂಗಳೂರು, ಮೇ. 19 : ತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಇನ್ಮುಂದೆ ತರುಪತಿಗೆ ಹೋಗಬೇಕಿಲ್ಲ. ಮುಂದಿನ ದಿನಗಳಲ್ಲಿ ವೆಂಕಟೇಶ್ವರನ ದರ್ಶನ ಬೆಂಗಳೂರಿನಲ್ಲೇ ದೊರೆಯಲಿದೆ. ಅಲ್ಲಿನ ಅದೇ ರುಚಿ ರುಚಿಯಾದ ಲಾಡು ಇಲ್ಲಿ ದೊರೆಯಲಿದೆ. ಪ್ರತಿ ಅಮವಾಸ್ಯೆಗೆ ರಾಜ್ಯದ ಭಕ್ತಾದಿಗಳು ದರ್ಶನ ಪಡೆಯಲು ತಿರುಪತಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ.

ಏಕೆಂದರೆ, ತಿರುಮಲ ತಿರುಪತಿ ದೇವಸ್ಥಾನ ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿ ಯಥಾವತ್ತಾಗಿ ರೂಪುಗೊಂಡಿದ್ದು, ಮೇ 23 ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ತಿರುಪತಿಗೆ ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ದೇವಸ್ಥಾನದ ಕೇಂದ್ರ ಆರಂಭಿಸುವ ಚಿಂತನೆಯನ್ನು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಕೈಗೊಂಡ ಫಲವೇ ಈ ದೇವಸ್ಥಾನ ನಿರ್ಮಾಣವಾಗಲು ಸಾಧ್ಯವಾಗಿದೆ.

ಚೆನ್ನೈನಲ್ಲಿ ಇದೇ ರೀತಿಯ ಕೇಂದ್ರ ಇದ್ದು, ದೇಶದ ಮೂರನೇ ಕೇಂದ್ರ ಬೆಂಗಳೂರಿನದ್ದಾಗಲಿದೆ ಎಂದು ತಿರುಮಲ ಟ್ರಸ್ಟ್ ನ ಸ್ಥಳೀಯ ಸಲಹೆ ಸಮಿತಿ ಅಧ್ಯಕ್ಷ ಪಿ ಶಾಮರಾಜು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X