ಮಂಪರು ಪರೀಕ್ಷೆಗೆ ತಣ್ಣೀರೆರಚಿದ ಸು.ಕೋರ್ಟ್

ಆರೋಪಿತ ವ್ಯಕ್ತಿಯ ಸ್ವಂತ ಇಚ್ಛೆಗೆ ವಿರೋಧ ವಾಗಿ ಮಂಪರು ಪರೀಕ್ಷೆ (ನಾರ್ಕೊ ಅನಾಲಿಸಿಸ್), ಸುಳ್ಳು ಪತ್ತೆ ಪರೀಕ್ಷೆ (ಪಾಲಿಗ್ರಾಫ್ ಟೆಸ್ಟ್) ಮತ್ತು ಮೆದಳು ನಕ್ಷೆ ತೆಗೆಯುವುದು (ಬ್ರೇನ್ ಮ್ಯಾಪಿಂಗ್) ಆ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ. ಆದ್ದರಿಂದ ಆರೋಪಿಯ ಇಚ್ಛೆಯಿಲ್ಲದೆ ಯಾವುದೇ ತಂತ್ರಜ್ಞಾನ ಆಧಾರಿತಪರೀಕ್ಷೆಯನ್ನು ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಾಧೀಶ ಕೆಜಿ ಬಾಲಕೃಷ್ಣನ್ ಹೇಳಿದರು.
ವಿಡಿಯೋ: ಮಂಪರು ಪರೀಕ್ಷೆಗೆ ನೋ ಎಂದ ಕೋರ್ಟ್
ಸುಪ್ರೀಂ ಕೋರ್ಟ್ ನ ಈ ಆದೇಶದಿಂದ ನಕಲಿ ಛಾಪಾ ಕಾಗದ ಹಗರಣದ ರುವಾರಿ ಅಬ್ದುಲ್ ಕರೀಂ ತೆಲಗಿ, ಮಾವೋವಾದಿ ನಾಯಕ ಕೊಬಾಡ್ ಗಾಂಡಿ, ಗುಜರಾತ್ನ 'ಗಾಡ್ ಮದರ್' ಖ್ಯಾತಿಯ ಸಂತೋಕ್ಬೆನ್ ಜಡೇಜಾ ಮುಂತಾದ ಪ್ರಕರಣಗಳ ತನಿಖೆಗೆ ತೀವ್ರ ಹಿನ್ನೆಡೆಯುಂಟಾಗುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications