ವಕ್ಫ್ ಮಂಡಳಿಗೆ ಮಹಿಳಾ ಸಿಇಒ

ವಕ್ಫ್ ಮಂಡಳಿ ಸೂಪರ್ ಸೀಡ್ ಹಾಗೂ ವಿಂಡ್ಸರ ಮ್ಯಾನರ್ ವಿವಾದಗಳು ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಹಜ್ ಯಾತ್ರಾರ್ಥಿಗಳಲ್ಲಿ ಮೂರು ಬಾರಿ ಅರ್ಜಿಸಲ್ಲಿಸಿದವರಿಗೆ ಆದ್ಯತೆ ನೀಡುವಂತೆ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು. ಥಣಿಸಂದ್ರದಲ್ಲಿ ಹಜ್ ಭವನ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸಚಿವ ಮುಮ್ತಾಜ್ ತಿಳಿಸಿದರು.
ಗೋಹತ್ಯೆ ನಿಷೇಧ: ಕೇವಲ ಧಾರ್ಮಿಕ ಕಾರಣಕ್ಕಾಗಿ ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತಿಲ್ಲ. ಆರ್ಥಿಕವಾಗಿಯೂ ಇದು ಬಾಧಿಸುತ್ತದೆ. ಇದಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ರೂಪಿಸಬೇಕು. ಸಸ್ಯಾಹಾರ ಒಳ್ಳೆಯದು, ಪ್ರವಾದಿಗಳು ಸಸ್ಯಾಹಾರಿಗಳಾಗಿದ್ದರು. ಹಾಗಂತ, ಯಾರ ಹೊಟ್ಟೆ ಮೇಲೂ ಹೊಡೆಯಬಾರದು.ಕಾನೂನಿನ ದುರುಪಯೋಗಬಾರದು ಎಂದು ಸಚಿವರು ತಿಳಿಸಿದರು.












Click it and Unblock the Notifications