ಒಬ್ಬರನ್ನು ಒಬ್ಬರು ಬೈಯುವುದೇ ಪ್ರಜಾಪ್ರಭುತ್ವ : ಭೈರಪ್ಪ

ಚುನಾವಣೆ ಮುಗಿದರೂ ಪತ್ರಿಕೆಗಳಲ್ಲಿ ಬೈಗುಳಗಳೇ ರಾರಾಜಿಸುತ್ತಿವೆ. ಮತದಾರರು ಬೇಕಾದವರಿಗೆ ಮತ ಹಾಕುತ್ತಾರೆ. ಹೀಗಿರುವಾಗ ನಮ್ಮರಾಜಕೀಯ ಪಕ್ಷಗಳು ಸೋಲನ್ನು ಏಕೆ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಪ್ರಶ್ನಿಸಿದರು. ಪ್ರಜಾಪ್ರಭುತ್ವ ಗುಣಾತ್ಮಕವಾಗಿ ಕೆಲಸ ಮಾಡಬೇಕೆಂದರೆ ಮಾತು ಕಡಿಮೆ ಮಾಡಿ, ಕೆಲಸದತ್ತ ಗಮನ ಹರಿಸಬೇಕು. ಇದು ರಾಜಕೀಯ ಮಾತ್ರ ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸುತ್ತದೆ.
ಅಧಿಕಾರವಿಲ್ಲದಿದ್ದರೂ ಸೇವೆ ಸಲ್ಲಿಸಬಹುದು. ಇದಕ್ಕೆ ಸೇವಾ ಮನೋಭಾವ ಬೇಕು. ಸೇವಾ ಮನೋಭಾವವುಳ್ಳವರು ಮಾತ್ರ ಅಧಿಕಾರದಲ್ಲಿರಲು ಅರ್ಹರು ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications