ಆಯೇಷಾಗೆ ತಲಾಖ್ ತಲಾಖ್ ತಲಾಖ್

ಆಂಧ್ರಪ್ರದೇಶದ ಅಲ್ಪ ಸಂಖ್ಯಾತ ಖಾತೆ ಸಚಿವ ಖಲೀದ್ ರಷೀದ್ ಖಾನ್ ಮಧ್ಯಸ್ಥಿಕೆಯಲ್ಲಿ ಎರಡೂ ಕುಟುಂಬದ ಸದಸ್ಯರು ನಿನ್ನೆ ತಡ ರಾತ್ರಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಮಧ್ಯಸ್ಥಿಕೆಯಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್ ಇಕ್ರಾಂ ಖಲೀಂ, ಮಲಿಕ್ ಈಗಾಗಲೇ ವಿಚ್ಛೇದನ ಪತ್ರಕ್ಕೆ ತಮ್ಮ ಸಹಿಹಾಕಿದ್ದಾರೆಂದು ತಿಳಿಸಿದ್ದಾರೆ. ಸಮುದಾಯದ ಗೌರವ ಕಾಪಾಡಿಕೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಧ್ಯಸ್ಥಿಕೆಯ ನಂತರ ಆಯೆಷಾ ಮಲಿಕ್ ವಿರುದ್ದದ ಕ್ರಿಮಿನಲ್ ಕೇಸ್ ಅನ್ನು ಹಿಂದಕ್ಕೆ ಪಡೆಯಲಿದ್ದಾರೆ. ಮಲಿಕ್ ಮತ್ತು ಆಯೇಷಾ ಕುಟುಂಬದ ನಡುವಣ ಎಲ್ಲಾ ವಿವಾದಗಳು ಈಗ ಬಗೆ ಹರಿದಿದೆ ಎಂದು ಖಲೀಂ ಹೇಳಿಕೆ ನೀಡಿದ್ದಾರೆ.












Click it and Unblock the Notifications