Get Updates
Get notified of breaking news, exclusive insights, and must-see stories!

ಶ್ರೀಗಳ ತೇಜೋವಧೆಗೆ ಯತ್ನಿಸಿದವರ ಬಂಧನ

Raghaveshwara Swamiji of Sriramachandrapura Matt
ಮಂಗಳೂರು, ಏ. 7 : ನಕಲಿ ಅಶ್ಲೀಲ ವಿಡಿಯೋ ಚಿತ್ರಿಸಿ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯ ತೇಜೋವಧೆ ಮಾಡಲು ಯತ್ನಿಸಿದ್ದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಶ್ರೀಗಳ ತೇಜೋವಧೆಗೆ ಯತ್ನಿಸಿದ್ದು ಗೋಕರ್ಣದ ಪುರೋಹಿತರ ಒಂದು ಬಣ ಎಂಬುದು ನುಂಗಲಾಗದ ಬಿಸಿ ತುಪ್ಪದಂತಾಗಿದೆ.

ರಾಘವೇಶ್ವರ ಸ್ವಾಮೀಜಿಯ ತದ್ರೂಪಿಯಂತೆ ಕಾಣುತ್ತಿದ್ದ ಕೋಟಿತೀರ್ಥದ ನಿವಾಸಿ ರವಿ ಕೊಡ್ಲೇಕರ ಅಲಿಯಾಸ್ ಬಾಲಚಂದ್ರ ಪ್ರಭಾಕರ ಕೊಡ್ಲೇಕರ (26), ಗೋಕರ್ಣದ ರಥಬೀದಿಯ ನಿವಾಸಿ ಶಿವರಾಮ ಅಡಿ (29) ಮತ್ತು ಗಜಾನನ ಸಾಂಬ ಉಪಾಧ್ಯಾಯ (42) ಎಂಬುವವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ಇನ್ನೂ ಒಂಬತ್ತು ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.

ಕಾವಿ ಧರಿಸಿದರೆ ಥೇಟ್ ರಾಘವೇಶ್ವರ ಶ್ರೀಗಳಂತೆ ಕಾಣುತ್ತಿದ್ದ ರವಿ ಕೊಡ್ಲೇಕರನನ್ನು ಬಳಸಿ ಕೇರಳದ ಗೆಸ್ಟ್ ಹೌಸ್ ಒಂದರಲ್ಲಿ ರವಿ ಮುಖವನ್ನು ಮರೆಮಾಚಿ ಅಶ್ಲೀಲ ದೃಶ್ಯಗಳಲ್ಲಿ ಭಾಗಿಯಾಗಿದ್ದ ಅರೆನಗ್ನ ಯುವತಿಯ ರಾಸಲೀಲೆಯ ಚಿತ್ರ ತೆಗೆಯಲಾಗಿತ್ತು. ಬಂಧಿತರಲ್ಲಿ ಬಾಲಚಂದ್ರ ಫೋಟೋ ತೆಗೆದಿದ್ದರೆ, ಮಿಕ್ಸಿಂಗ್ ನಲ್ಲಿ ನಿಷ್ಣಾತನಾಗಿದ್ದ ಗಜಾನನ ಮುಂದಿನ ಕೆಲಸ ಮಾಡಿದ್ದ.

ಶ್ರೀರಾಮಚಂದ್ರಾಪುರ ಮಠ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ಆದಾಯದಲ್ಲಿ ಖೋತಾ ಕಂಡಿದ್ದ ಪುರೋಹಿತರ ಗುಂಪೊಂದು ರಾಘವೇಶ್ವರ ಸ್ವಾಮೀಜಿಯ ವಿರುದ್ಧ ಕತ್ತಿ ಮಸೆಯುತ್ತಿತ್ತು ಎನ್ನಲಾಗಿದೆ. ಈ ತಂಡವೇ ಅಶ್ಲೀಲ ಸಿಡಿ ತಯಾರಿಕಾ ಕ್ರಿಯೆಯಲ್ಲಿ ಭಾಗಿಯಾಗಿದೆ.

ಈ ಸಿಡಿ ಹಗರಣದ ಹಿಂದೆ ದೊಡ್ಡ ಜಾಲವೇ ಇದ್ದು, ಈ ಪ್ರಕರಣವನ್ನು ತನಿಖೆಗಾಗಿ ಸಿಓಡಿಗೆ ಒಪ್ಪಿಸಬೇಕೆಂದು ಪುತ್ತೂರಿನ ಶಾಸಕಿ ಮಲ್ಲಿಕಾ ಪ್ರಸಾದ್ ಆಗ್ರಹಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+