ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಜೆ ಮೇಲೆ ತೆರಳಲು ದಿನಕರನ್ ನಕಾರ?
ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಕುರಿತು ಸುಪ್ರೀಂಕೋರ್ಟ್ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ ಎಂದು ದಿನಕರನ್ ಸ್ಪಷ್ಟಪಡಿಸಿದ್ದಾರೆ. ಭೂಕಬಳಿಕೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಮುಂತಾದ ಆರೋಪಗಳ ಹಿನ್ನೆಲೆಯಲ್ಲಿ ದಿನಕರನ್ ಅವರನ್ನು ರಜೆ ಮೇಲೆ ತೆರಳುವಂತೆ ಸೂಚಿಸಿ, ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರನ್ನು ದಿನಕರನ್ ಅವರ ಸ್ಥಾನದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಹೆಸರಿಸಲಾಗಿತ್ತು.
ಒಂದು ವೇಳೆ ಮುಖ್ಯ ನ್ಯಾಯಮೂರ್ತಿ ಅವರು ರಜೆ ಮೇಲೆ ತೆರಳಿದರೆ ಮಾತ್ರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರು ಅಧಿಕಾರ ವಹಿಸಿಕೊಳ್ಳಲು ಸಾಧ್ಯ. ಆದರೆ, ದಿನಕರನ್ ಅವರು ನ್ಯಾಯಮೂರ್ತಿಗಳ ಸಮಿತಿ ನೀಡಿದ್ದ ಸೂಚನೆಯನ್ನು ನಿರಾಕರಿಸಬಹುದು ಎಂದು ಹಿರಿಯ ವಕೀಲ ಶಾಂತಿಭೂಷಣ್ ಅಭಿಪ್ರಾಯಪಟ್ಟಿದ್ದಾರೆ.
Comments
ಪಿಡಿ ದಿನಕರನ್ ಹೈಕೋರ್ಟ್ ಸುಪ್ರೀಂಕೋರ್ಟ್ ವಂಚನೆ ಭ್ರಷ್ಟಾಚಾರ ರಾಜ್ಯಸಭೆ ಬೆಂಗಳೂರು ರಜೆ pd dinakaran karnataka high court supreme court of india corruption rajya sabha
Story first published: Tuesday, April 6, 2010, 17:47 [IST]