ಸಿಆರ್ ಪಿಎಫ್ ಯೋಧರ ಭೀಕರ ನರಮೇಧ
ಇದೊಂದು ಅತ್ಯಂತ ಹೇಯ ಕೆಲಸ ಎಂದು ಛತ್ತೀಸ್ ಗಢ ಪೊಲೀಸ್ ಮಹಾನಿರ್ದೇಶಕ ಆರ್ ಕೆ ಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಕಾಲಕ್ಕೆ ಸಾವಿರಾರು ಸಂಖ್ಯೆ ಶಸ್ತ್ರಸಜ್ಜಿತ ಮಾವೋವಾದಿಗಳು ನಡೆಸಿದ ಭೀಕರ ನರಮೇಧಕ್ಕೆ ಕಮಾಂಡೆಂಟ್, ಸಹಾಯಕ ಕಮಾಂಡೆಂಟ್ ಸೇರಿ 72ಸಿಆರ್ ಪಿಎಫ್ ಹಾಗೂ ಒಬ್ಬ ಜಿಲ್ಲಾ ಪೊಲೀಸ್ ಸಾವನ್ನಪ್ಪಿದ್ದಾರೆ ಸಿಆರ್ ಪಿಎಫ್ ನಿರ್ದೇಶಕ ವಿಕ್ರಂ ಶ್ರೀವಾಸ್ತವ ತಿಳಿಸಿದ್ದಾರೆ.
80 ಮಂದಿ ಸಿಆರ್ ಪಿಎಫ್ ಪಡೆಯ ಮೇಲೆ ದಾಳಿ ನಡೆದಿದ್ದು, ಸಾವನ್ನಪ್ಪಿರುವ ಎಲ್ಲ ಯೋಧರು ಕಳೇಬರವನ್ನು ಹೊರಕ್ಕೆ ತೆಗೆಯಲಾಗಿದೆ. ಗಾಯಗೊಂಡ 8 ಮಂದಿ ಸಿಆರ್ ಪಿಎಫ್ ಯೋಧರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾವೋವಾದಿಗಳ ಹಾವಳಿ ಕಡಿವಾಣ ಹಾಕುವ ಸಲುವಾಗಿ ಸಿಆರ್ ಪಿಎಫ್ ಪಡೆಯನ್ನು ಮುಕ್ರಾನಾ ದಟ್ಟಾರಣ್ಯದಲ್ಲಿ ನಿಯೋಜಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಪಿ ಚಿದಂಬರಂ, ಇದು ಅತ್ಯಂತ ಕರಾಳ ದಿನ. ಮಾವೋವಾದಿಗಳು ಇಡುತ್ತಿರುವ ಹೆಜ್ಜೆ ಖಂಡನಾರ್ಹವಾಗಿದೆ. 73 ಮಂದಿ ಯೋಧರ ಸಾವು ನನ್ನನ್ನು ಅಧೀರಗೊಳಿಸಿದೆ. ಮಾವೋವಾದಿಗಳ ಕೃತ್ಯ ದುರದೃಷ್ಟಕರ ಅವರು ಸಿಡಿಮಿಡಿಗೊಂಡರು.