ಬಡಮಕ್ಕಳಿಗೆ ಶಾಲೆಯಲ್ಲಿ ಸೀಟು ಬಿಟ್ಟುಕೊಡಿ

ಗುರುವಾರ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು, ಈ ನಿಯಮವನ್ನು ಮೀರುವ ಶಾಲೆಗಳು ಶಿಕ್ಷಣದ ಹಕ್ಕು ಪ್ರಕಾರ ಶಿಕ್ಷಾರ್ಹರಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ. 'ಇದು ಕಾನೂನಾ' ಎಂಬ ಪ್ರಶ್ನೆಗೆ ಉತ್ತರಿಸಿ ಅವರು 'ಹೌದು, ಇದು ಶಾಸನ ವಿಧಿಸಿದ ಎಚ್ಚರಿಕೆ' ಎಂದು ಸ್ಪಷ್ಟಪಡಿಸಿದು. ಕಾನೂನು ಉಲ್ಲಂಘನೆ ಮಾಡುವ ಶಾಲೆಗಳು ಶಿಕ್ಷೆಗೆ ಗುರಿಯಾಗುತ್ತವೆ ಎಂದು ಅವರು ಒತ್ತಿ ಹೇಳಿದರು.
ಈ ಕಾನೂನು ಅನುದಾನಿತ ಮತ್ತು ಅನುದಾನ ಪಡೆಯದ ಶಾಲೆಗಳಿಗೆ ಏಕಕಾಲಕ್ಕೆ ಅನ್ವಯಿಸುತ್ತದೆ. ಅದೇ ರೀತಿ ಅಲ್ಪಸಂಖ್ಯಾತರು ನಡೆಸುವ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ಕಪಿಲ್ ತಿಳಿಸಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ಶಿಕ್ಷಣದ ಹಕ್ಕು (RTE) ಇಂದಿನಿಂದ, ಅಂದರೆ ಗುರುವಾರ ಏಪ್ರಿಲ್ 1ರಿಂದ ಮೂಲಭೂತ ಹಕ್ಕಾಗಿ ಜಾರಿಯಾಗಿದೆ.
ಈ ಕಾಯ್ದೆಯ ಜಾರಿಯಿಂದಾಗಿ ದೇಶದಲ್ಲಿರುವ 6ರಿಂದ 14 ವರ್ಷದೊಳಗಿರುವ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಲಭಿಸಲಿದೆ. ರಾಷ್ಟ್ರದಲ್ಲಿ ಈ ವಯಸ್ಸಿನ 22 ಕೋಟಿ ಮಕ್ಕಳಿದ್ದು, ಮಕ್ಕಳಿಗೆ ಶಿಕ್ಷಣ ದೊರಕಿಸುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳ ಮೇಲಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಪಕ್ಷಭೇದ ಮರೆತು ಕೇಂದ್ರದೊಡನೆ ಕೈಜೋಡಿಸಬೇಕು ಎಂದು ಪ್ರಧಾನಿ ಮನಮೋಹನ ಸಿಂಗ್ ಅವರು ಕರೆ ನೀಡಿದ್ದಾರೆ.












Click it and Unblock the Notifications