ಮೈಸೂರಿನಲ್ಲಿ ನೋಟು ಕಾಗದ ತಯಾರಿಕಾ ಘಟಕ

ನೋಟುಗಳ ಮುದ್ರಣಕ್ಕೆ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ವರದಿ ಸಿದ್ಧವಾದ ಬಳಿಕ ಆರ್ ಬಿಐನೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ನಕಲಿ ನೋಟು ತಯಾರಿಸುವವರ ಹಾವಳಿ ಹೆಚ್ಚಾಗಿದೆ. ದೇಶದ ಆರ್ಥಿಕ ಸ್ಥಿತಿಗೆ ಇದರಿಂದ ಧಕ್ಕೆಯಾಗುತ್ತಿದೆ. ಆರ್ ಬಿಐ ಸ್ವತಃ ಕಾಗದ ತಯಾರಿಸಿಕೊಳ್ಳುವುದರಿಂದ ನಕಲಿ ನೋಟಿನ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಪ್ರಣಬ್ ತಿಳಿಸಿದರು.












Click it and Unblock the Notifications