ಹೆದ್ದಾರಿಯಲ್ಲಿ ಭೀಕರ ಅಪಘಾತ: ಡ್ರೈವರ್ ಪರಾರಿ

ಮೆಟಡೋರ್ ಚಾಲಕ ಜಗದೀಶ (30) ವಧುವಿನ ತಂದೆ ಕುಂಟಯ್ಯ (45) ಸೋದರತ್ತೆ ಕಲ್ಯಾಣಿ (50) ಶಿವ(32) ಒಂಬತ್ತು ವರ್ಷದ ಬಾಲಕ, 8 ವರ್ಷದ ಬಾಲಕಿ, 3 ವರ್ಷದ ಮಗು ಸೇರಿದಂತೆ ಹತ್ತು ಮಂದಿ ಮೃತಪಟ್ಟಿದ್ದು, ಇವರೆಲ್ಲರೂ ಚನ್ನರಾಯಪಟ್ಟಣ ಮತ್ತು ಕೆ.ಆರ್.ಪೇಟೆ ತಾಲೂಕಿನವರು. ವಧುವಿನ ಸಹಿತ ಕುಟುಂಬದವರು ಚನ್ನರಾಯಪಟ್ಟಣದ ಸೋಮನಾಥನಹಳ್ಳಿ ಯಿಂದ ಹಾಸನಕ್ಕೆ ಭಾನುವಾರ ಮದುವೆ ನಡೆಯಬೇಕಿದ್ದ ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದರು.
ವಧು ಆಶಾಲತಾ (20) ಗೌರಮ್ಮ (32) ಬೇಲೂರಯ್ಯ(42) ಶಶಿಧರ (17) ದೇವರಾಜು(35) ಶಶಿಕಲಾ(17) ಋತು (5)ವಿಜಯಮ್ಮ (50) ಮರಿದ್ಯಾ ವಪ್ಪ(45) ಭಾಗ್ಯ(25) ಜಯಮ್ಮ(40) ಸೇರಿದಂತೆ ಸುಮಾರು 45 ಜನ ಗಾಯಗೊಂಡಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದ್ದು, ಐವರ ಸ್ಥಿತಿ ಗಂಭೀರವಾಗಿದೆ.












Click it and Unblock the Notifications