ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪ ಮೊಯಿಲಿಗೆ ಮೂರ್ತಿದೇವಿ ಪ್ರಶಸ್ತಿ

By Rajendra
|
Google Oneindia Kannada News

Moily gets Moortidevi award
ನವದೆಹಲಿ, ಮಾ.18: ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯಿಲಿ ಅವರಿಗೆ ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ ಮೂರ್ತಿದೇವಿ ಪ್ರಶಸ್ತಿಯನ್ನು ಇಂದು (ಮಾ.18) ಪ್ರದಾನ ಮಾಡಲಾಗುತ್ತದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಮೊಯಿಲಿ ಅವರು ರಚಿಸಿರುವ 'ಶ್ರೀ ರಾಮಯಣ ಮಹಾನ್ವೇಷಣಂ' ಮಹಾಕಾವ್ಯಕ್ಕಾಗಿ ಈ ಪ್ರಶಸ್ತಿ ದೊರಕಿದೆ. ಕನ್ನಡದ ಪ್ರಮುಖ ಬರಗಾರರಾಗಿರುವ ಮೊಯಿಲಿ ಐದು ಸಂಪುಟಗಳಲ್ಲಿ ಶ್ರೀ ರಾಮಾಯಣ ಮಹಾನ್ವೇಷಣಂ ಮಾಹಾಕಾವ್ಯವನ್ನು ರಚಿಸಿದ್ದರು.

ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೊಯಿಲಿ ನಾಲ್ಕು ಕಾದಂಬರಿ, ಮೂರು ಕವನ ಸಂಗ್ರಹ, ಮೂರು ನಾಟಕಗಳನ್ನು ರಚಿಸಿದ್ದಾರೆ. 2007ರಲ್ಲಿ ಮೊಯಿಲಿ ಅವರಿಗೆ ಫಾದರ್ ಕಮಿಲ್ ಬುಲ್ಕೆ ರಾಮಾಯಣ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X