ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಬಿಎಂಪಿ : ಬಿಜೆಪಿ ಪರ ಪ್ರಚಾರಕ್ಕೆ ಹೇಮಮಾಲಿನಿ
ಈ ಮಧ್ಯೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ನಾಳೆ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಬಿಜೆಪಿಗೆ ಸೇರುವ ಬಗ್ಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಈ ಬಾರಿ ಹಿರಿ ತೆರೆ, ಕಿರುತೆರೆ ಹಾಗೂ ಕ್ರಿಕೆಟ್ ಲೋಕದ ಖ್ಯಾತನಾಮರೆಲ್ಲಾ ಒಗ್ಗೂಡಿ ಬಿಜೆಪಿ ಪರ ಪ್ರಚಾರಕ್ಕೆ ನಿಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.
ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆಯಲು ಮಾ.19 ಕೊನೆ ದಿನಾಂಕವಾಗಿದೆ. ಮಾ. 28ರಂದು ಮತದಾನ ನಡೆಯಲಿದ್ದು, ಏ. 5ರಂದು ಅಭ್ಯರ್ಥಿಗಳ ಭವಿಷ್ಯದ ಫಲಿತಾಂಶ ಹೊರಬೀಳಲಿದೆ. ಬಹುತೇಕ ಕಡೆ ತ್ರಿಕೋನ ಸ್ಪರ್ಧೆಯಿದ್ದರೂ, ಪ್ರತಿಷ್ಠೆಗಾಗಿ ಎಲ್ಲ ಪಕ್ಷಗಳು ವಿಭಿನ್ನ ಪ್ರಚಾರಕ್ಕೆ ಮುಂದಾಗಿವೆ.
Comments
ಹೇಮಮಾಲಿನಿ ಬಿಬಿಎಂಪಿ ಚುನಾವಣೆ ನವಜೋತ್ ಸಿಂಗ್ ಸಿದ್ದು ಸ್ಮೃತಿ ಇರಾನಿ ಬಿಜೆಪಿ ಬೆಂಗಳೂರು hemamalini bbmp election smriti irani bjp bengaluru navjot singh sidhu yediyurappa
Story first published: Thursday, March 18, 2010, 18:32 [IST]