ಬೇಲಿಯೇ ಎದ್ದು ಹೊಲ ಮೇಯ್ದಾಗ !!

ವಿಶೇಷ ಕಾರ್ಯಪಡೆಯ (STF) ಏಳು ಮಂದಿ ಅಧಿಕಾರಿಗಳು ಸಮವಸ್ತ್ರ ಧರಿಸದೆ(ಮಫ್ತಿ) ನಗರದಲ್ಲಿ ಮಾರ್ಚ್ 11ರಂದು ಇಬ್ಬರು ಉದ್ಯಮಿಗಳನ್ನು ಲೂಟಿ ಮಾಡಿದ್ದಾರೆ. ಸ್ಟಾಕ್ ದಲ್ಲಾಳಿಯ ಅಂಗಡಿಗೆ ನುಗ್ಗಿದ ದರೋಡೆಕೋರ ಕಮ್ ಈ ಪೋಲಿಸ್ ಅಧಿಕಾರಿಗಳು ಆರು ಲಕ್ಷ ರೂಪಾಯಿ ದೋಚಿದ್ದಾರೆ. ಅದೇ ದಿನ ವಿ ಕೆ ಮಲ್ಹೋತ್ರ ಎನ್ನುವವರ ಆಭರಣ ಅಂಗಡಿಗೆ ನುಗ್ಗಿದ ಇವರು ಅವರಿಂದ 10ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.
ಆದರೆ ಮಲ್ಹೋತ್ರ ಒಂದು ಲಕ್ಷ ರೂಪಾಯಿ ಮಾತ್ರ ನೀಡಿ ಉಳಿದ ಹಣವನ್ನು 30 ನಿಮಿಷದಲ್ಲಿ ಹೊಂದಿಸಿ ಕೊಡುತ್ತೇನೆಂದು ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ. ನಂತರ ಈ ತಂಡದ ಒಬ್ಬ ಸದಸ್ಯ ಉಳಿದ ಹಣ ತೆಗೆದುಕೊಳ್ಳಲು ಮಲ್ಹೋತ್ರ ಬಳಿಗೆ ಬಂದಾಗ ಬಾಕಿ 9ಲಕ್ಷರೂಪಾಯಿ ಹಣವನ್ನು ಪೋಲಿಸ್ ಅಧಿಕಾರಿಗಳ ಮುಂದೆ ಕೊಡುವುದಾಗಿ ಹೇಳಿದಾಗ ಈ ಡೋಂಗಿ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾನೆ.
ಆದರೆ ಮಲ್ಹೋತ್ರ ಈ ತಂಡದ ಜೊತೆ ನಡೆಸಿದ ಮಾತುಕತೆಯನ್ನು ತನ್ನ ಭದ್ರತಾ ಕ್ಯಾಮರದಲ್ಲಿ ಸೆರೆ ಹಿಡಿದಿದ್ದರು. ಮಲ್ಹೋತ್ರ ಇದಕ್ಕೆ ಸಂಬಂಧಿಸಿದ ಟೇಪ್ ಅನ್ನು ಹರ್ಯಾಣ ಪೋಲಿಸ್ ಆಯುಕ್ತರಿಗೆ ನೀಡಿದ್ದಾರೆ. ಈ ತಂಡದಲ್ಲಿದ್ದ ಒಬ್ಬ ಸದಸ್ಯನನ್ನು ವಿಶೇಷ ಕಾರ್ಯಪಡೆಗೆ ಸೇರುವ ಮುಂಚೆ ಪಾಣಿಪಟ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸ್ ಸ್ಟೇಬಲ್ ಜಗ್ಬೀರ್ ಸಿಂಗ್ ಎಂದು ಆಯುಕ್ತರು ಪತ್ತೆ ಹಚ್ಚಿದ್ದಾರೆ.
2007ರಲ್ಲಿ ಇಪ್ಪತ್ತು ಮಂದಿಯ ಈ ವಿಶೇಷ ತಂಡವನ್ನು ಭಯೋತ್ಪಾದನೆ, ನಕ್ಸಲ್ ಮತ್ತು ಅಪರಾಧ ತಡೆಗಟ್ಟಲು ಸರಕಾರ ನಿಯೋಜಿಸಿತ್ತು. ಈ ಘಟನೆಯ ನಂತರ ಮುಜುಗರಕ್ಕೊಳಗಾಗಿರುವ ಸರಕಾರ ವಿಶೇಷ ಕಾರ್ಯಪಡೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications