ಚರ್ಚೆಗೆ ಬನ್ನಿ ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧರಾಗಿ

ಮುಂಬೈ ದಾಳಿ ಬಳಿಕ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮೊದಲ ಅಧಿಕೃತ ಮಾತುಕತೆ ನವದೆಹಲಿಯಲ್ಲಿ ಫೆ. 25 ರಂದು ನಡೆದಿರುವ ಮಧ್ಯೆಯೂ ಭಾರತಕ್ಕೆ ಯುದ್ದ ಬೇಕಾಗಿದೆ ಎಂದು ಉಗ್ರ ಹಫೀಜ್ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾನೆ. ಮುಂಬೈ ದಾಳಿಯ ಆರೋಪಿ ಎಂದು ಭಾರತ ಯಾವುದೇ ನ್ಯಾಯಾಲಯದಲ್ಲಾದರೂ ಸಾಬೀತುಪಡಿಸಿದರೆ ಒಪ್ಪಿಕೊಳ್ಳಲು ಸಿದ್ಧ ಎಂದಿದ್ದಾನೆ.
ಭಾರತದ ವಿರುದ್ಧ ಜಿಹಾದ್ ಗಾಗಿ ಜನ ಕಾಶ್ಮೀರಕ್ಕೆ ತೆರಳಬೇಕೇ ಎಂದಿದ್ದಕ್ಕೆ ಅದರಲ್ಲಿ ಸಂದೇಹವೇ ಇಲ್ಲ. ಅದು ಆಗಲೇಬೇಕು ಎಂದು ಹೇಳಿದ್ದಾನೆ. ಸಂದರ್ಶನದಲ್ಲಿ ಸಯೀದ್ ಮುಖವನ್ನು ಮುಚ್ಚಿ ಹಿಂಬದಿಯಿಂದ ಆತನ ಹೆಗಲಿನ ಭಾಗವನ್ನು ಮಾತ್ರ ತೋರಿಸಲಾಯಿತು. ಷರಿಯ ಅಥವಾ ಇಸ್ಲಾಂ ಕಾನೂನಿನಲ್ಲಿ ಮುಖ ತೋರಿಸಲು ಅವಕಾಶವಿಲ್ಲ ಎಂದು ಆತ ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾನೆ.












Click it and Unblock the Notifications