ಮೈಸೂರಿನಲ್ಲಿ ಕಿದ್ವಾಯಿ ಶಾಖೆ ಆರಂಭ

ಮೊದಲ ಹಂತದಲ್ಲಿ ಪ್ರಥಮ ಹಂತದ ಕ್ಯಾನ್ಸರ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಮೈಸೂರಿನ ಸುತ್ತಮುತ್ತಲಿನ ಜನರು ಬೆಂಗಳೂರಿನವರೆಗೂ ಬಂದು ತಪಾಸಣೆ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಅನೇಕ ಜನರು ಈ ರೋಗಕ್ಕೆ ಮರಣವನ್ನಪ್ಪಿದ್ದಾರೆ. ಜನಸಾಮಾನ್ಯರಿಗೂ ಉತ್ತಮ ಚಿಕಿತ್ಸೆ ದೊರೆಯಬೇಕು ಎನ್ನುವ ದೃಷ್ಟಿಯಿಂದ ಕ್ಯಾನ್ಸರ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಮುಂದಿನ ಆರು ತಿಂಗಳೊಳಗೆ ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯುವ ಬಗ್ಗೆ ಸಕಲ ವ್ಯವಸ್ಥೆಗಳನ್ನೂ ಮಾಡಲಾಗುವುದು ಎಂದು ರಾಮಚಂದ್ರಗೌಡ ಹೇಳಿದರು.
ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ. ಎಂ ವಿಜಯಕುಮಾರ್, ಎಂಎಂಸಿಆರ್ಐನ ಡಾ ಡಿ ವೆಂಕಟೇಶ್, ಕೆ ಆರ್ ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ ಗೀತಾ ಕೆ ಅವಧಾನಿ ಸೇರಿ ಅನೇಕ ವೈದ್ಯರು ಹಾಜರಿದ್ದರು.












Click it and Unblock the Notifications