Get Updates
Get notified of breaking news, exclusive insights, and must-see stories!

ಕೀಟ ವಿಸ್ಮಯ ಒಂದು ವಿನೂತನ ಪ್ರದರ್ಶನ

Insects Exhibition by Vismya Pratishtana
ಚಿಕ್ಕಮಗಳೂರು, ಫೆ. 16:ಪರಿಸರವಾದಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಆಸಕ್ತಿದಾಯಕ ವಿಷಯಗಳಲ್ಲಿ ಕೀಟಗಳ ಜೀವನಕ್ರಮ ಅಧ್ಯಯನವು ಒಂದು. ಕೀಟಗಳ ವಿಸ್ಮಯ ಲೋಕದ ಪರಿಚಯವನ್ನು ಎಲ್ಲರಿಗೂ ತಲುಪಿಸುವುದು, ಅದರಲ್ಲೂ ವೈವಿಧ್ಯಮಯ ಕೀಟಗಳ ಬಗ್ಗೆ ಎಳೆಯರಿಗೆ ವಿವರಿಸಿ, ಅವರೊಟ್ಟಿಗೆ ತಾವು ಬೆರೆತು, ಅನಂದ ಅನುಭೂತಿ ಹೊಂದುತ್ತಿದ್ದರು.

ತೇಜಸ್ವಿ ಅವರ ಜೀವಿತಾವಧಿಯಲ್ಲೂ ಕೀಟಗಳ ಪರಿಚಯ ಹಾಗೂ ಮಾಹಿತಿ ಪಸರಿಸಲು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಅವರ ಅಶಯದ ಅನುಸಾರವಾಗಿ ಸಾಗಲು ಪಣತೊಟ್ಟಿರುವ ಮೂಡಿಗೆರೆಯ ನೇಚರ್ ಕ್ಲಬ್ ಹಾಗೂ ವಿಸ್ಮಯ ಪ್ರತಿಷ್ಠಾನದವರು ಈಗ ಮತ್ತೊಮ್ಮೆ ಜಿಲ್ಲಾ ಕೇಂದ್ರದಲ್ಲಿ ಕೀಟಗಳ ವಿಸ್ಮಯ ಲೋಕ ಅನಾವರಣಕ್ಕೆ ಮುಂದಾಗಿದ್ದಾರೆ.

ಫೆ. 19 ರಿಂದ ಫೆ. 21 ರವರೆಗೆ ಚಿಕ್ಕಮಗಳೂರಿನ ಎಂಎಲ್ ವಿ ರೋಟರಿ ಹಾಲ್ ನಲ್ಲಿ 'ಕೀಟ ವಿಸ್ಮಯ' ಪ್ರದರ್ಶನವಿರುತ್ತದೆ. ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 7 ರವರೆಗೆ ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಆಸಕ್ತಿಯನ್ನು ತಣಿಸಿಕೊಳ್ಳಬಹುದು ಎಂದು ವಿಸ್ಮಯ ಪ್ರತಿಷ್ಠಾನದ ಸಹಕಾರ್ಯದರ್ಶಿ ಮಗ್ಗಲಮಕ್ಕಿ ಗಣೇಶ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+