ದಂಡಾವತಿ ಯೋಜನೆ ನಿಲ್ಲದು, ಹಾಲಪ್ಪ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಯೋಜನೆಗೆ ಪ್ರಯತ್ನಿಸಿದರೇ ಇದೀಗ ರಾಜಕೀಯ ಲಾಭಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ದಂಡಾವತಿ ಯೋಜನೆ ಆಗಲೇಬೇಕಾಗಿದ್ದು, ಅನುಷ್ಠಾನಗೊಳಿಸಲು ಸರಕಾರ ಬದ್ಧವಾಗಿದೆ. ಯೋಜನೆಗೆ ಟೆಂಡರ್ ಅಂತಿಮಗೊಂಡಿದ್ದು, ಗುದ್ದಲಿ ಪೂಜೆಯೂ ನಡೆದಿದೆ ಎಂದರು.
272 ಕೋಟಿ ರುಪಾಯಿ ಮೊತ್ತದ ಈ ನೀರಾವರಿಯಿಂದ ಸೊರಬ ಮತ್ತು ಶಿಕಾರಿಪುರ ತಾಲ್ಲೂಕಿನ 17,132 ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಯೋಜನೆಯಿಂದ ನಾಲ್ಕು ಗ್ರಾಮಗಳು ಮುಳುಗಡೆಯಾಗಲಿದ್ದು, ಪುನರ್ವಸತಿ ಕಲ್ಪಿಸಬೇಕಾಗಿದೆ. ಅರಣ್ಯ ಇಲಾಖೆಯ 113 ಎಕರೆ ಭೂಮಿ ಸೇರಿದಂತೆ 1347 ಎಕರೆ ಮಾತ್ರ ಮುಳುಗಡೆ ಆಗಲಿದೆ ಎಂದು ಹಾಲಪ್ಪ ವಿವರಿಸಿದರು.












Click it and Unblock the Notifications