ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋದಾವರಿಯಲ್ಲಿ ದೋಣಿ ಮಗುಚಿ 10 ಸಾವು
ದೇಸಿ ನಿರ್ಮಿತ ದೋಣಿಯಲ್ಲಿ 40ರಿಂದ 50 ಮಂದಿ ಪ್ರಯಾಣಿಸುತ್ತಿದ್ದರು. ಶನಿವಾರ ಮುಂಜಾನೆ 6.30ರ ಸಮಯದಲ್ಲಿ ಬಿಯಪುಟೇರು ಎಂಬ ಗ್ರಾಮದ ಬಳಿ ದೋಣಿ ಮಗುಚಿಬಿದ್ದ ಕಾರಣ ಈ ದುರಂತ ಸಂಭವಿಸಿತು ಎಂದು ಪಶ್ಚಿಮ ಗೋದಾವರಿ ಜಿಲ್ಲಾಧಿಕಾರಿ ಬಿ ಬಾಲಕೃಷ್ಣ ತಿಳಿಸಿದ್ದಾರೆ.
ಇದುವರೆಗೂ ಹತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇವರೆಲ್ಲಾ ಅಂತರ್ವೇದಿ ಸಮೀಪ ನಡೆಯುತ್ತಿರುವ ಉತ್ಸವವೊಂದರಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ನಾಪತ್ತೆಯಾದವರ ಪತ್ತೆ ಕಾರ್ಯ ಭರದಿಂದ ಸಾಗಿದೆ.
Comments
Story first published: Saturday, January 30, 2010, 11:22 [IST]