ದಾಯಾದಿ ಕಲಹ : ತಮ್ಮನನ್ನೇ ಕೊಂದ ಅಣ್ಣಂದಿರು!
ಡಿಜೆ ಹಳ್ಳಿ ಮಸೀದಿ ರಸ್ತೆ ನಿವಾಸಿ ಜಾಫರ್ ಅಲಿ (37) ಕೊಲೆಯಾದವರು. ಮೃತನ ಅಣ್ಣಂದಿರಾದ ರೆಹಮತ್ ವುಲ್ಲಾ(54) ಹಾಗೂ ಅಸ್ಗರ್ (53) ಬಂಧಿತರು. ಜಾಫರ್ ನನ್ನು ಅಹಪರಿಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದ ರೆಹಮತ್ ವುಲ್ಲಾನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು ಶವವನ್ನು ಗುರುವಾರ ಹೊರತೆಗೆದಿದ್ದಾರೆ.
ಜಾಫರ್ ಅಲಿಖಾನ್ ಗೆ ನಾಲ್ವರು ಸಹೋದರರು. ಹದಿನೈದು ವರ್ಷಗಳ ಹಿಂದೆ ಜಾಫರ್ ದುಬೈಗೆ ಕೆಲಸಕ್ಕೆ ತೆರಳಿದ್ದರು. ಅವರ ಜೊತೆ ಹೋಗಿದ್ದ ಅಸ್ಗರ್ ಕೆಲಕಾಲದ ನಂತರ ಬೆಂಗಳೂರಿಗೆ ವಾಪಸಾಗಿದ್ದ. ಆದರೆ, ಜಾಫರ್ ಅಲ್ಲೇ ಉಳಿದು ರೆಹಮತ್ ಮತ್ತು ಅಸ್ಗರ್ ಗೆ ಹಣ ಕಳುಹಿಸುತ್ತಿದ್ದರು. ದುಬೈನಲ್ಲಿ ಆರ್ಥಿಕ ಕುಸಿತದಿಂದಾಗಿ ತಿಂಗಳ ಹಿಂದೆ ಜಾಫರ್ ಬೆಂಗಳೂರಿಗೆ ವಾಪಸಾಗಿ ಬೆಂಗಳೂರಿನಲ್ಲಿ ವ್ಯಾಪಾರ ಆರಂಭಿಸಿದ್ದರು. ಇಲ್ಲಿಗೆ ಬಂದ ನಂತರ ಅಣ್ಣಂದಿರಿಗೆ ಹಣ ಕೊಡುವುದನ್ನು ನಿಲ್ಲಿಸಿದ್ದ. ಇದರಿಂದ ಕುಪಿತಗೊಂಡ ರೆಹಮತ್ ಮತ್ತು ಅಸ್ಗರ್ ತಮ್ಮ ಜಾಫರ್ ನನ್ನು ಕೊಲ್ಲಲು ಸಂಚು ರೂಪಿಸಿದ್ದರು.