ಈಗ ಆಪರೇಶನ್ ಪಾಪಾಸುಕಳ್ಳಿ

ಭಿನ್ನಮತೀಯ ಶಾಸಕರ ಒಂದು ದೊಡ್ಡ (18 ಶಾಸಕರು) ಗುಂಪು ಹಗಲಿರುಳು ಸರಕಾರ ಹಾಗೂ ತಮ್ಮ ವಿರುದ್ಧ ಮೆಣಸಿನಕಾಯಿ ಅರೆಯುತ್ತಿದೆ ಎಂಬ ಪ್ರಜ್ಞೆ ಯಡ್ಡಿಗಿಲ್ಲದಿಲ್ಲ. ಇದನ್ನು ಹೀಗೆ ಬಿಟ್ಟರೆ ಮುಂದೊಂದು ಕಂಟಕವಾಗುತ್ತದೆಂದು ಅವರಿಗೆ ಗೊತ್ತಿಲ್ಲದೆಯೇನೂ ಇಲ್ಲ. ಹಾಗಾದರೆ ದಾರಿ ಏನು?
ಇರುವುದೊಂದೇ ದಾರಿ. ಮತ್ತೆ ಆಪರೇಷನ್ ಮಾಡು ಸರ್ವಜ್ಞ ಎಂಬ ಮಂತ್ರ ಭಾಜಪ ವಲಯಗಳಿಂದ ಕೇಳಿ ಬರುತ್ತಿದೆ. ಈ ಮಂತ್ರಕ್ಕೆ ಎರಡು ಮಾವಿನ ಕಾಯಿಗಳು ಉದುರಬೇಕು. ಮಂತ್ರಿಗಿರಿಗೆ ಶಬರಿಯಂತೆ ಕಾದುಕಾದು ಬೇಸತ್ತಿರುವ ರೇಣುಕಾಚಾರ್ಯ, ಶಿವಾನಂದ ನಾಯಕ, ಅಸ್ನೋಟಿಕರ್, ಬೇಳೂರು ಗೋಪಾಲಕೃಷ್ಣ ಬಳಗದ ಹಲ್ಲು ಕೀಳಬೇಕು ಜತೆಗೆ ಬರಲಿರುವ ಬಿಬಿಎಂಪಿ ಚುನಾವಣೆಯಲ್ಲಿ (ಡಿಸೆಂಬರ್ 21) ಬಿಜೆಪಿ ಗೆದ್ದು ಬೆಂಗಳೂರನ್ನು ಆಳಬೇಕು. ಅಂದಹಾಗೆ, ಮೇಲ್ಮನೆ ಚುನಾವಣೆಯಲ್ಲಿ (ಡಿಸೆಂಬರ್ 18) ಗೆಲ್ಲಬೇಕು, ಗೆದ್ದು ಅಲ್ಲೂ ಬಹುಮತ ಸಾಧಿಸಬೇಕು.
ಸರಕಾರವನ್ನು ಭದ್ರಮಾಡಿಟ್ಟುಕೊಳ್ಳುವುದು ಮತ್ತು ಯಾವುದೇ ಕ್ಷಣ ಸರಕಾರಕ್ಕೆ ಅಪಾಯ ಬಂದೊದಗಿದರೆ ಈಗಲೇ ಅದಕ್ಕೆ ಸಿದ್ಧವಾಗಿರಬೇಕು ಎನ್ನುವುದು ಆಳುವ ಬಿಜೆಪಿ ಗುಂಪಿನ ಲೆಕ್ಕಾಚಾರ. ಅಲ್ಪ ಬಹುಮತ ಯಾವತ್ತಿದ್ದರೂ ಗಂಡಾಂತರಕಾರಿ. ಇಂಥ ಸಂದರ್ಭದಲ್ಲಿ ಸರಕಾರ ಉರುಳಿಸಲು ಪ್ರತಿಪಕ್ಷಗಳು ಷಡ್ಯಂತ್ರ ನಡೆಸಬಹುದು. ಅಲ್ಲದೆ, ಅತೃಪ್ತ ಶಾಸಕರು ಬ್ಲ್ಯಾಕ್ ಮೇಲ್ ಮಾಡಬಹುದು. ಇಂತಹ ಚಟುವಟಿಕೆಗಳು ನಡೆಯುತ್ತಿದ್ದರೆ ನೆಮ್ಮದಿಯಾಗಿ ಆಡಳಿತ ನಡೆಸಲು ಆಗುವುದಿಲ್ಲ. ಇದಕ್ಕೆಲ್ಲ ತೆರೆ ಎಳೆಯುವುದು ಹಾಗೂ ಸರಕಾರವನ್ನು ಹೆಚ್ಚಿನ ಬಹುಮತದತ್ತ ಕೊಂಡೊಯ್ಯುವುದಕ್ಕೆ ಏಕಮಾತ್ರ ಗುಳಿಗೆ ಆಪರೇಶನ್ ಕಮಲ.
ಆಪರೇಶನ್ನಿಗೆ ಈಗಾಗಲೇ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಕಮಲದ ಮಾತುಕತೆಗಳಲ್ಲಿ ಸಚಿವರಾದ ಆರ್. ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕರುಣಾಕರ ರೆಡ್ಡಿ ಹಾಗೂ ಗೋವಿಂದ ಕಾರಜೋಳ ಭಾಗವಹಿಸಿದ್ದಾರೆ. ತಮಾಷೆಯೆಂದರೆ, ಎಂದಿನಂತೆ ಆಪರೇಶನ್ ಕಮಲ ಕಾರ್ಯಾಚರಣೆಗೆ ರೆಡ್ಡಿಗಳ ಬೆಂಬಲ ಇದೆ. ರೆಡ್ಡಿಗಳ ಬಲ ಬೆಂಬಲ ಇಲ್ಲದೆ ಆಪರೇಶನ್ ಆಗುವುದಿಲ್ಲ ಎಂಬ ಮಟ್ಟಿಗೆ ಬಿಜೆಪಿ ರಾಜಕೀಯ ಅವಲಂಬಿತವಾಗಿದೆ. ಇವೆಲ್ಲದರ ಜತೆಗೆ ಬೆಂಗಳೂರಿನ 198 ವಾರ್ಡುಗಳಲ್ಲಿ ಬಿಜೆಪಿ ಬಲಾಬಲದ ಪತ್ತೆ ಆಗಬೇಕು. ಆಪರೇಶನ್ ಎಲ್ಲೆಲ್ಲಿ ಅಗತ್ಯ ಎಂಬ ಹುಡುಕಾಟಕ್ಕೆ ಯಡ್ಡಿ ತಜ್ಞ ವೈದ್ಯರನ್ನು ಬಿಟ್ಟಿದ್ದಾರೆಂದೂ ಸುದ್ದಿ.
ಆಪರೇಶನ್ ಕಮಲ ಕಾರ್ಯಾಚರಣೆಯಿಂದ ಬಿಜೆಪಿಗೆ ಸಾಕಷ್ಟು ಅಪಖ್ಯಾತಿ ಬಂದಿದ್ದರೂ ಮತ್ತೆ ಅದೇ ಹುತ್ತಕ್ಕೆ ಕೈಹಾಕುವ ಚಪಲವನ್ನು ಯಡ್ಡಿ ಮತ್ತು ಸದಾನಂದ ಗೌಡ ಅಂಡ್ ಗ್ಯಾಂಗ್ ತೋರಿಸುತ್ತಿರುವುದು ಶೋಚನೀಯವಾಗಿದೆ. ಹಾಗಾಗಿ ಆಪರೇಶನ್ ಕಮಲ ಕಾರ್ಯಾಚರಣೆಗೆ ಹೊಸ ಹೆಸರು ಇಟ್ಟರೆ ಲೇಸೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. ಹೊಸ ಹೆಸರು ಈ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. 1) ಆಪರೇಷನ್ ಕ್ಯಾಕ್ಟಸ್ 2) ಆಪರೇಶನ್ ಪಾಪಾಸುಕಳ್ಳಿ.
(ದಟ್ಸ್ ಕನ್ನಡ ವಾರ್ತೆ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications