Get Updates
Get notified of breaking news, exclusive insights, and must-see stories!

ಸೇನಾ ಪುಂಡರ ದಾಳಿಗೆ ಐಬಿಎನ್ ಕಚೇರಿ ಧ್ವಂಸ

Shiva sena activists attack CNN-IBN office in Mumbai and Pune
ಮುಂಬೈ/ಪುಣೆ, ನ. 20 : ಮಹಾರಾಷ್ಟ್ರದಲ್ಲಿ ಶಿವಸೇನೆ ರೌಡಿಗಳ ಪುಂಡಾಟಿಕೆ ಮುಂದುವರೆದಿದ್ದು, ಮುಂಬೈ ಮತ್ತು ಪುಣೆಯಲ್ಲಿರುವ ಐಬಿಎನ್ ಲೋಕಮಾತ (ಮರಾಠಿ) ಐಬಿಎನ್ 7 (ಹಿಂದಿ) ಕಚೇರಿ ಮೇಲೆ ದಾಳಿ ನಡೆಸಿರುವ ಶಿವಸೇನೆ ಕಾರ್ಯಕರ್ತರು ಕಚೇರಿ ಧ್ವಂಸಗೊಳಿಸಿದ್ದಾರೆ. ದಾಳಿಯಲ್ಲಿ ಕೆಲ ಪತ್ರಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಹತಾಶೆಗೊಂಡಿರುವ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಹಾಗೂ ಅವರ ಪಟಾಲಂ ಮಾಡಿರುವ ಅತ್ಯಂತ ಖಂಡನೀಯ ಕೆಲಸ. ಶಿವಸೇನೆಯ ಈ ಸಂವಿಧಾನ ವಿರೋಧ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ. ಇತ್ತೀಚೆಗೆ ಸಮಾಜವಾದಿ ಪಕ್ಷ ಶಾಸಕ ಅಬು ಅಜ್ಮಿ, ವಿಧಾನಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಎಂಎನ್ಎಸ್ ರೌಡಿ ಎಂಎಲ್ಎಗಳು ಅಜ್ಮಿ ಅವರ ಮೇಲೆ ದಾಳಿ ನಡೆಸಿದ್ದರು. ಅದು ಕೂಡಾ ದೇಶವ್ಯಾಪಿ ಟೀಕೆಗೆ ಒಳಗಾಗಿತ್ತು.

ಅದಕ್ಕೂ ಮುಂಚೆ ಉತ್ತರ ಭಾರತದ ಕೆಲಸಗಾರರು ಮುಂಬೈನಲ್ಲಿ ಕೆಲಸ ಮಾಡಬಾರದು ಎಂದು ರಾಜ್ ಠಾಕ್ರೆ ಮತ್ತು ಬಾಳಾ ಠಾಕ್ರೆ ಅವರ ತಂಡ ದಾಳಿ ನಡೆಸಿ ಅವರನ್ನು ಮಹಾರಾಷ್ಟ್ರದಿಂದ ಓಡಿಸಿದ್ದು ಗೊತ್ತಿರುವ ಸಂಗತಿ. ಇತ್ತೀಚೆಗೆ ಕ್ರಿಕೆಟ್ ರಂಗದ ದಂತಕತೆ ಸಚಿನ್ ತೆಂಡೂಲ್ಕರ್ ಅವರು 'ಮೊದಲು ನಾನು ಭಾರತೀಯ, ನಂತರ ಮಹಾರಾಷ್ಟ್ರದವ' ಎಂದು ಹೇಳಿದ್ದಕ್ಕೆ ಬಾಳಾ ಠಾಕ್ರೆ ಟೀಕಿಸಿದ್ದರು. ಈ ಹಿಂದೆ ಬಾಲಿವುಡ್ ಅತ್ಯಂತ ಹಿರಿಯ ನಟ ಅಮಿತಾಬ್ ಬಚ್ಚನ್ ಅವರನ್ನು ಬಿಟ್ಟು ಬಿಡದೆ ಎಂಎನ್ಎಸ್ ಪುಂಡರು ಕಾಟಕೊಟ್ಟಿದ್ದು ಗೊತ್ತೆ ಇದೆ. ಕರಣ್ ಜೋಹರ್ ನಿರ್ದೇಶನ ಹಿಂದಿ ಸಿನಿಮಾವೊಂದರಲ್ಲಿ ಮುಂಬೈಯನ್ನು ಬಾಂಬೆ ಎಂದು ತಪ್ಪಾಗಿ ಬಳಿಸಿದ್ದಕ್ಕೆ ಎಂಎನ್ಎಸ್ ಪುಂಡರು ಚಿತ್ರಮಂದಿರಕ್ಕೆ ದಾಳಿ ನಡೆಸಿ, ನಿರ್ದೇಶಕರಿಂದ ಕ್ಷಮಾಪಣೆ ಪಡೆದುಕೊಂಡು ಚಿತ್ರ ಪ್ರಸಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಶಿವಸೇನೆ ಮತ್ತು ಎಂಎನ್ಎಸ್ ನಾಯಕರ ಮತ್ತು ಕಾರ್ಯಕರ್ತರ ಕೃತ್ಯಗಳಿಗೆ ಕೊನೆ ಮೊದಲೆಂಬುದಿಲ್ಲ.

ಒಟ್ಟಿನಲ್ಲಿ ಇಂತಹ ಸಮಾಜ ವಿರೋಧಿ ಪ್ರಾಂತೀಯ ರಾಜಕೀಯ ಪಕ್ಷಗಳು, ಸಮಾಜದ ಶಾಂತಿ ಸೌಹಾರ್ದತೆಯನ್ನು ಕದಡುವ ರಾಜ್ ಠಾಕ್ರೆ ಅವರಂತಹ ರೌಡಿ ಸಂಘಟನೆಗಳು ಬೇಕೆ? ಅಬು ಅಜ್ಮಿ ಮೇಲೆ ದಾಳಿ ನಡೆಸಿದಾಗ ಎಂಎನ್ಎಸ್ ಪಕ್ಷವನ್ನು ನಿಷೇಧಿಸಬೇಕು ಎಂದು ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಪ್ರಾಂತ, ಭಾಷೆ ಇಟ್ಟುಕೊಂಡು ರಾಜಕೀಯ ಮಾಡುತ್ತಾ, ಆ ಮೂಲಕ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿರುವ ಇಂತಹ ಪಕ್ಷಗಳು ಬೇಡವೇ ಬೇಡ ಎನ್ನುವುದು ಎಲ್ಲರ ಒಕ್ಕೂರಲಿ ಮಾತಾಗಿದೆ.

ಘಟನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ದಾಳಿಕೋರರು ಎಷ್ಟೇ ಬಲಿಷ್ಠರಾದರೂ ಅವರಿಗೆ ಶಿಕ್ಷೆ ವಿಧಿಸುವ ಭರವಸೆ ನೀಡಿದ್ದಾರೆ. ಮಾಧ್ಯಮಗಳ ಮೇಲೆ ಪದೆಪದೇ ದಾಳಿಗಳು ನಡೆಯುತ್ತಿವೆ. ಆಹಮದಾಬಾದಿನ ಎನ್ ಡಿಟಿವಿ ಕಚೇರಿ, ಬೆಂಗಳೂರಿನಲ್ಲಿ ಸ್ಟಾರ್ ಟಿವಿ ಕಚೇರಿ, ಕನ್ನಡದ ಚಾನೆಲ್ ಗಳು ಕೂಡಾ ಗೂಂಡಾಗಳ ದಾಳಿಗೆ ಒಳಗಾಗಿವೆ. ಈ ಘಟನೆ ಖಂಡಿಸಿ ನಾಳೆ ಮುಂಬೈಯಲ್ಲಿ ಎಲ್ಲ ಪತ್ರಕರ್ತರೂ ಶಾಂತಿಯುತ ಮೆರವಣಿಗೆ ಮಾಡುವುದಾಗಿ ಸಿಎನ್ಎನ್-ಐಬಿಎನ್ ರಾಷ್ಟ್ರೀಯ ಸಂಪಾದಕ ರಾಜ್ ದೀಪ್ ಸರದೇಸಾಯಿ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+