'ವಂದೇ ಮಾತರಂ'ಫತ್ವಾಗೆ ಸಚಿವ ಸಲ್ಮಾನ್ ವಿರೋಧ

ಇದು ಒಪ್ಪುವಂತಹದ್ದಲ್ಲ ಎಂದಿರುವ ಅವರು, ಜೆಯುಎಚ್ ಸಂಘಟನೆ ಎರಡು ಬಣಗಳಾಗಿ ಒಡೆದು ಹೋಗಿರುವುದರಿಂದ ಈ ಅಭಿಪ್ರಾಯ ಇಡೀ ಸಂಘಟನೆಯನ್ನು ಧ್ವನಿಸುವ ಸಾಧ್ಯತೆಯಿಲ್ಲ. ಈ ಬೆಳವಣಿಗೆ ನಮ್ಮ ಸಮಾಜ ಅಥವಾ ದೇಶಕ್ಕೆ ಮಾತ್ರವಲ್ಲ, ಮುಸ್ಲಿಮರಿಗೂ ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಗೀತೆಯನ್ನು ಹಾಡುವಂತೆ ಅಥವಾ ಹಾಡದಿರುವಂತೆ ಒತ್ತಡ ಹೇರುವುದು ಸರಿಯಲ್ಲ. ಕೆಲವರು ಮುಸ್ಲಿಮರನ್ನು ಪ್ರಚೋದಿಸುವ ಸಲುವಾಗಿಯೇ ವಂದೇ ಮಾತರಂ ಹಾಡುತ್ತಾರೆ ಎನ್ನುವ ಸಂಘಟನೆಯ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಸಚಿವ ಖುರ್ಷಿದ್ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications