ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗಳಿಂದ ಪ್ರಾದೇಶಿಕ ಪಕ್ಷ ಸ್ಥಾಪನೆ ?

|
Google Oneindia Kannada News

Janardhan Reddy
ಬೆಂಗಳೂರು, ನ. 4 : ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಬೇಕು ಎಂದು ಕಂಕಣ ತೊಟ್ಟಿರುವ ರೆಡ್ಡಿ ಸಹೋದರರು ಒಂದು ವೇಳೆ ಬಿಜೆಪಿ ಹೈಕಮಾಂಡ್ ಅಂತಿಮವಾಗಿಯೂ ಒಪ್ಪದಿದ್ದರೆ ಅವರು ತುಳಿಯುವ ಹಾದಿಯ ಬಗ್ಗೆ ಭಾರಿ ಕುತೂಹಲವಂತೂ ಹುಟ್ಟಿಸಿದೆ.

ಒಂದು ಮೂಲಗಳ ಪ್ರಕಾರ ರೆಡ್ಡಿಗಳು ಪರ್ಯಾಯ ಸರಕಾರ ರಚನೆ ಯತ್ನ ವಿಫಲವಾಗಿ ಚುನಾವಣೆ ಎದುರಿಸುವ ಸ್ಥಿತಿ ನಿರ್ಮಾಣವಾದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟುಹಾಕುವ ಆಲೋಚನೆಯಲ್ಲಿ ರೆಡ್ಡಿ ಸಹೋದರರು ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟಿರುವ ಜನಾರ್ದನರೆಡ್ಡಿ ತಮ್ಮ ಪಟ್ಟನ್ನು ಬಿಡುತ್ತಿಲ್ಲ. ನಾಯಕತ್ವ ಬದಲಾವಣೆಯೇ ನಮ್ಮ ಏಕೈಕ ಉದ್ದೇಶ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಹೈಕಮಾಂಡ್ ಈಗಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಮಧ್ಯೆ ರೆಡ್ಡಿಗಳಿಗೆ ಆಪ್ತರು ಎನ್ನಲಾದ ಸುಷ್ಮಾ ಸ್ವರಾಜ್ ಅವರೊಂದಿಗೆ ಜನಾರ್ದನರೆಡ್ಡಿ ಈಗಾಗಲೇ ಎರಡು ಸಾರಿ ನಡೆಸಿದ ಮಾತುಕತೆ ವಿಫಲವಾಗಿದೆ. ಇಂದು ಮೂರನೇ ಸುತ್ತಿನ ಮಾತುಕತೆ ಆರಂಭವಾಗಿದೆ.

ತಮ್ಮ ಬೇಡಿಕೆ ಒಪ್ಪದೆ ಬಿಕ್ಕಟ್ಟು ಉಲ್ಬಣಿಸಿ ಚುನಾವಣೆ ಎದುರಾದರೆ ಪ್ರಾದೇಶಿಕ ಪಕ್ಷ ಕಟ್ಟುವುದು ರೆಡ್ಡಿಗಳ ಲೆಕ್ಕಚಾರ. ಇದಕ್ಕಾಗಿ ಬಳ್ಳಾರಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಗದಗ, ಬಿಜಾಪುರ ಹಾಗೂ ಚಿತ್ರದುರ್ಗಗಳನ್ನು ಕೇಂದ್ರಕರಿಸಿ ಪ್ರಾದೇಶಿಕ ಪಕ್ಷ ಸ್ಥಾಪಿಸಿದರೆ ಹೆಚ್ಚು ಸ್ಥಾನ ಗಳಿಸಬಹುದು ಎನ್ನುವುದು ರೆಡ್ಡಿ ಉದ್ದೇಶ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X