ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಸಹೋದರರಿಗಾಗಿ ಪ್ರಾಣ ಬಿಡುತ್ತೇವೆ

|
Google Oneindia Kannada News

Janardhan Reddy
ರಾಯಚೂರು ಅ 31 : ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂಬ ಒಂದೇ ಒಂದು ಕಾರಣಕ್ಕಾಗಿ ನಾನು, ಆನಂದ ಅಸ್ನೋಟಿಕರ್ ಮತ್ತು ಬಾಲಚಂದ್ರ ಜಾರಕಿಹೊಳಿ ರಾಜೀನಾಮೆ ಕೊಟ್ಟೆವು. ನಾವು ಬಿಜೆಪಿಗೆ ಸೇರಿದ್ದು ರೆಡ್ಡಿ ಸಹೋದರರು ನಮ್ಮ ಮನವೊಲಿಸಿದ್ದರಿಂದಲೇ ಹೊರತು ಯಡಿಯೂರಪ್ಪ ಅವರಲ್ಲ. ಸದಾ ಒಳಿತನ್ನೇ ಬಯಸುವ ರೆಡ್ಡಿ ಸಹೋದರರಿಗಾಗಿ ನಾವು ಪ್ರಾಣ ಕೊಡಲೂ ಸಿದ್ಧ ಎಂದು ರಾಜ್ಯ ಸಣ್ಣ ಉಳಿತಾಯ ಖಾತೆ ಸಚಿವ ಕೆ. ಶಿವನಗೌಡ ನಾಯಕ
ಗುಡುಗಿದ್ದಾರೆ.

ಐದು ವರ್ಷ ಸುಭದ್ರ ಸರ್ಕಾರ ಇರಲಿ ಎಂಬ ಒಂದೇ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆವು. ಈ ಭಾಗದ ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿದಾಗಲೆಲ್ಲಾ ಯಡಿಯೂರಪ್ಪ ಸ್ಪಂದಿಸುತ್ತಿರಲಿಲ್ಲ ಅಷ್ಟೇ ಯಾಕೆ ಸಭೆಯ ನಡುವೆಯೇ ಎಷ್ಟೋ ಸಲ ಎದ್ದು ಹೋಗುತ್ತಿದ್ದರು. ಮುಖ್ಯಮಂತ್ರಿ ಆದ ಬಳಿಕ ನಿಮ್ಮ ಕ್ಷೇತ್ರದ ಜನ ಅಥವಾ ಅಭಿವೃದ್ದಿ ಕೆಲಸ ನಡೆಯುತ್ತಿದೆಯೇ ಎಂದು ಕೇಳುವ ಕನಿಷ್ಟ ಸೌಜನ್ಯ ಕೂಡ ಅವರಿಗಿಲ್ಲ ಎಂದು ನಾಯಕ್ ತಮ್ಮ ನೋವು ತೋಡಿಕೊಂಡಿದ್ದಾರೆ.

ರೆಡ್ಡಿ ಸಹೋದರರೊಂದಿಗೆ ನಾನು ಗುರುತಿಸಿಕೊಂಡಿದ್ದೇನೆ ಮತ್ತು ನೈತಿಕವಾಗಿಯೇ ಅವರೊಂದಿಗಿದ್ದೇನೆ. ಕ್ಷೇತ್ರದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ, ಒಳಿತನ್ನೇ ಮಾಡುವಂಥವರೊಂದಿಗೆ ನಾನಿದ್ದೇನೆ. ಇದನ್ನು ಹೇಳಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ ಎಂದು ನಾಯಕ್ ಹೇಳಿದ್ದಾರೆ. ಅವರು ಶುಕ್ರವಾರ (ಅ 30 ) ದೇವದುರ್ಗ ತಾಲ್ಲೂಕಿನ ಮ್ಯಾದರಗೋಳ ಗ್ರಾಮದಲ್ಲಿ ನೆರೆ ಹಾವಳಿ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಪುನರ್ವಸತಿ ಗ್ರಾಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X