ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅರುಣಾಚಲಕ್ಕೆ ಪಿಎಂ ಭೇಟಿ : ಚೀನಾ ಕ್ಯಾತೆ
ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಬೇಕಿದ್ದರಿಂದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪ್ರಚಾರ ಕಾರ್ಯಕ್ಕಾಗಿ ಇತ್ತೀಚೆಗೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಭಾರತದ ಪ್ರಧಾನಮಂತ್ರಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದು ಶುದ್ಧ ತಪ್ಪು. ಇದರಿಂದ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಈ ಮೂಲಕ ಭಾರತ ಮತ್ತು ಚೀನಾ ಬಾಂಧವ್ಯಕ್ಕೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆಯೂ ಚೀನಾ ಗಡಿ ವಿಚಾರಕ್ಕೆ ಖ್ಯಾತೆ ತೆಗೆದಿದ್ದರು. ಅಂದಿನ ವಿದೇಶಾಂಗ ಮಂತ್ರಿಯಾಗಿದ್ದ ಪ್ರಣಬ್ ಮುಖರ್ಜಿ ಅವರು ಅರುಣಾಚಲ ಪ್ರದೇಶ ಭಾರತದ ಅಂಗ. ನಮ್ಮ ದೇಶದಲ್ಲಿ ಭಾರತದ ಪ್ರಧಾನಿಗಳು ಎಲ್ಲಿಯಾದರೂ, ಯಾವ ಕ್ಷಣದಲ್ಲಾದರೂ ಭೇಟಿ ನೀಡುವ ಸಂಪೂರ್ಣ ಅಧಿಕಾರವಿದೆ ಎಂದು ಚೀನಾಕ್ಕೆ ತಿರುಗೇಟು ನೀಡಿದ್ದರು.
(ಏಜನ್ಸೀಸ್)
Comments
ಮನಮೋಹನ್ ಸಿಂಗ್ ಪ್ರಣಬ್ ಮುಖರ್ಜಿ ಎಸ್ಎಂ ಕೃಷ್ಣ sm krishna manmohan singh pranab mukherjee ಚೀನಾ china arunachal pradesh ಅರುಣಾಚಲ ಪ್ರದೇಶ
Story first published: Tuesday, October 13, 2009, 16:14 [IST]