ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ : 52 ಕೋಟಿ ರುಪಾಯಿ ಹಾನಿ

|
Google Oneindia Kannada News

Chitradurga
ಚಿತ್ರದುರ್ಗ, ಅ. 5 : ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ಮತ್ತು ಅಕ್ಟೋಬರ್ 3 ರವರೆಗೆ ಬಿದ್ದ ಅಧಿಕ ಮಳೆಯಿಂದ 8 ಜನರು ಮೃತರಾಗಿದ್ದು, ಜಾನುವಾರುಗಳಿಗೆ ಜೀವಹಾನಿಯಾಗಿದೆ ಹಾಗೂ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅಪಾರವಾದ ನಷ್ಟ ಉಂಟಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳು ಸೇರಿದಂತೆ ಸುಮಾರು 31.52 ಕೋಟಿ ನಷ್ಟವನ್ನು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.

ಕಳೆದ ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಕಳೆದ ಆಗಸ್ಟ್‌ನಲ್ಲಿ 50.8 ಮಿ.ಮೀ ವಾಡಿಕೆಗೆ 141.6 ಮಿ.ಮೀ, ಸೆಪ್ಟೆಂಬರ್‌ನಲ್ಲಿ 84.5 ಮಿ.ಮೀ ವಾಡಿಕೆಗೆ 199.4 ಮಿ.ಮೀ ಮತ್ತು ಅಕ್ಟೋಬರ್ 3 ರ ವರೆಗೆ 21.9 ಮಿ.ಮೀ ವಾಡಿಕೆಗೆ 38.6 ಮಿ.ಮೀ ವಾಸ್ತವಿಕ ಮಳೆಯಾಗಿದೆ.

ಜಿಲ್ಲೆಯ ವಾರ್ಷಿಕ ಮಳೆ ಜನವರಿಯಿಂದ ಡಿಸೆಂಬರ್‌ವರೆಗೆ 486.6 ಮಿ.ಮೀ ವಾಡಿಕೆ ಇದ್ದು, ಜನವರಿಯಿಂದ ಅಕ್ಟೋಬರ್ 3 ರವರೆಗೆ 705.6 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಅಕ್ಟೋಬರ್‌ವರೆಗೆ ಬಿದ್ದ ತಾಲ್ಲೂಕುವಾರು ಮಳೆಯ ವಿವರದನ್ವಯ ಚಳ್ಳಕೆರೆ 603.2, ಚಿತ್ರದುರ್ಗ 728.3, ಹಿರಿಯೂರು 636.5, ಹೊಳಲ್ಕೆರೆ 830.2, ಹೊಸದುರ್ಗ 738.1, ಮೊಳಕಾಲ್ಮುರು 697.3 ಮಿ.ಮೀ ಮಳೆಯಾಗಿದೆ.

ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ 3 ರವರೆಗೆ ಅಧಿಕ ಮಳೆಯಿಂದ 8 ಜನರು ಮೃತರಾಗಿದ್ದು ತಲಾ 1 ಲಕ್ಷ ಪರಿಹಾರವನ್ನು ನೀಡಲಾಗಿದೆ. ಮತ್ತು 42 ಚಿಕ್ಕ ಮತ್ತು 8 ದೊಡ್ಡ ಜಾನುವಾರುಗಳಿಗೆ ಜೀವಹಾನಿ ಸಂಭವಿಸಿ ಕುಟುಂಬದವರಿಗೆ 2.07 ಲಕ್ಷ ಪರಿಹಾರದ ಹಣವನ್ನು ಜಿಲ್ಲಾ ಆಡಳಿತ ನೀಡಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X