ಥೈಲ್ಯಾಂಡ್ :ಸುವರ್ಣಭೂಮಿ, ಸ್ವಚ್ಛ ಭೂಮಿ

ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುವರ್ಣಭೂಮಿ'ಯಲ್ಲಿ ನೀವು ಇಳಿಯುತ್ತಿದ್ದಂತೆಯೇ ಅಲ್ಲೂ ಕೈಮುಗಿದು ನಿಮ್ಮನ್ನು ಬರಮಾಡಿಕೊಳ್ಳುತ್ತಾರೆ. ನೀವು ಅಂಗಡಿ-ಮಳಿಗೆ ಪ್ರವೇಶಿಸುವಾಗಲೂ ಕೈಮುಗಿದು ಸ್ವಾಗತ, ನಿರ್ಗಮಿಸುವಾಗಲೂ ಅಂಥದ್ದೇ ಸ್ವಾಗತ. ನೀವು ಏನನ್ನು ಖರೀದಿಸದಿದ್ದರೂ ಅವರ ಮುಖದಲ್ಲಿ ಬೇಸರವಿಲ್ಲ ಅಥವಾ ಇಲ್ಲಿ ನಾವು ಕಾಣುವ ಹಾಗೆ ಮುಖಸಿಂಡರಿಸಿಕೊಂಡು ಶಪಿಸುವುದಿಲ್ಲ.
ಥೈಲ್ಯಾಂಡ್ ದೇಶದ ಬಗ್ಗೆ ಯಾವುದೇ ಪ್ರವಾಸಿಗರಿಗೇ ಆಗಲೀ ಮೆಚ್ಚುಗೆ ಬರದಿರಲು ಕಾರಣಗಳೇ ಇಲ್ಲ. ಇಲ್ಲಿ ಬಹುಮುಖ್ಯವಾಗಿ ಗಮನ ಸೆಳೆಯುವ ಅಂಶವೆಂದರೆ ಸ್ವಚ್ಚತೆ. ಅಲ್ಲಿರುವ ರಸ್ತೆಗಳು, ಹೆದ್ದಾರಿಗಳು ನಮ್ಮ ಮನೆಯ ಪಡಸಾಲೆಗಿಂತಲೂ ನೀಟಾಗಿರುತ್ತವೆ ಅಂದರೆ ಉತ್ಪ್ರೇಕ್ಷೆ ಅಂದುಕೊಳ್ಳುವಿರಿ, ಆದರೆ ಖಂಡಿತಕ್ಕೂ ಅಲ್ಲಿನ ರಸ್ತೆಗಳು ಅಂಥಮೆಚ್ಚುಗೆಗೆ ಅರ್ಹವಾಗಿವೆ.
ನಮ್ಮ ರಾಜ್ಯದ ಅಥವಾ ಜಿಲ್ಲೆಯ ಯಾವುದೇ ನಗರದಲ್ಲೇ ಆಗಲಿ ವಾಹನಗಳು ಬ್ಲಾಕ್ ಆಗುವುದು, ರಸ್ತೆ ಸಂಚಾರ ಅಸ್ತವ್ಯಸ್ತವಾಗುದು ಸರ್ವೇಸಾಮಾನ್ಯ. ಆ ದೇಶದ ಹೆದ್ದಾರಿಗಳಲ್ಲೂ ಕೂಡಾ ಬ್ಲಾಕ್ ಆಗುವ ಪ್ರಮೇಯವೇ ಇಲ್ಲ, ಯಾಕೆಂದರೆ ಹೆದ್ದಾರಿ ಎಲ್ಲೂ ಒಂದನ್ನೊಂದು ಸಂಧಿಸುವಾಗಲೂ ಮತ್ತೊಂದು ವಾಹನ ನಿಂತು ಹೋಗಬೇಕಾಗಿಲ್ಲ. ಅಂಥ ಇಂಜಿನಿಯರಿಂಗ್ ಪರಿಣತಿ ಆ ಹೆದ್ದಾರಿ ನಿರ್ಮಾಣದಲ್ಲಿ ಕೆಲಸ ಮಾಡಿವೆ, ಆದ್ದರಿಂದಲೇ ಅಲ್ಲಿನ ಹೆದ್ದಾರಿಗಳೂ ಕೂಡಾ ಇತರ ದೇಶಗಳಿಗೆ ಮಾದರಿ ಎನ್ನಬಹುದು.
ನಾವು ಎಲ್ಲೆಂದರಲ್ಲಿ ಉಗುಳಬಹುದು ಇಲ್ಲಿ. ಯಾಕೆಂದರೆ ನಮ್ಮದು ಸ್ವತಂತ್ರದೇಶ ಮತ್ತು ನಾವೂ ಸ್ವತಂತ್ರರು, ನಾವು ಉಗುಳುವುದನ್ನು ಯಾರೂ ಇಲ್ಲಿ ಪ್ರಶ್ನಿಸುವಂತಿಲ್ಲ. ಆದರೆ ಥೈಲ್ಯಾಂಡ್ ದೇಶದ ರಸ್ತೆಯಲ್ಲೂ ನೀವು ಉಗುಳುವಂತಿಲ್ಲ. ನಮ್ಮೂರಲ್ಲಿ ನಿಮ್ಮ ಮೂಗಿನ ಸಿಂಬಳವನ್ನು ರಸ್ತೆಗೆ ಎಸೆದು ಅಥವಾ ನೀವು ಪ್ರಯಾಣಿಸುವ ವಾಹನದ ಹೊರಕವಚಕ್ಕೆ ಒರೆಸಿ ಕರವಸ್ತ್ರದಿಂದ ಕೈಒರೆಸಿಕೊಂಡು ಸುಮ್ಮನಾಗಬಹುದು. ಆದರೆ ಅಲ್ಲಿ ಉಗುಳುವಂತಿಲ್ಲ ಅಥವಾ ಪ್ರಯಾಣಿಸುವ ವಾಹದ ಹೊರಕವಚಕ್ಕೆ ಒರೆಸಿ ಏನೂಗೊತ್ತಿಲ್ಲದವರಂತೆ ನಟಿಸುವಂತಿಲ್ಲ, ಒಂದುವೇಳೆ ಭಾರತದಂತೆಯೇ ಅಲ್ಲೂ ಮಾಡಿದರೆ ಎಚ್ಚರಿಕೆ ಪಕ್ಕದಲ್ಲಿದ್ದವರಿಂದಲೇ ಬರುತ್ತದೆ. ಆದ್ದರಿಂದಲೇ ಅಲ್ಲಿನ ರಸ್ತೆಗಳಲ್ಲಿ ಯಾರೂ ಉಗುಳುವಿಲ್ಲ, ಅದಕ್ಕೇ ಅಲ್ಲಿನ ರಸ್ತೆಗಳು ಅಷ್ಟು ನೀಟಾಗಿವೆ.
ರಸ್ತೆಗಳ ಮೇಲೆ ಅಥವಾ ರಸ್ತೆ ಅಕ್ಕಪಕ್ಕದಲ್ಲಿ ಕಾಗದ, ತ್ಯಾಜ್ಯವನ್ನು ಎಸೆಯುವಂತಿಲ್ಲ. ನಿಮ್ಮ ಕೈಯಲ್ಲಿ ಕಾಗದ, ಪ್ಲಾಸ್ಟಿಕ್ ಇದ್ದರೆ ತ್ಯಾಜ್ಯ ಎಸೆಯಲೆಂದೇ ಅಲ್ಲಲ್ಲಿ ಇಟ್ಟಿರುವ ಕಸದತೊಟ್ಟಿಯನ್ನು ಬಳಕೆ ಮಾಡಬೇಕು. ರಸ್ತೆಗೆ ತ್ಯಾಜ್ಯ ಎಸೆದರೆ ನಿಮ್ಮನ್ನು ಪೊಲೀಸರು ಮೊದಲು ಸ್ವಾಗತಿಸಿ, ನಂತರ ನೀವು ಮಾಡಿದ ತಪ್ಪಿಗೆ ದಂಡಕಟ್ಟಿಸುತ್ತಾರೆ. ನಿಜಕ್ಕೂ ಇಂಥವೆಲ್ಲಾ ಸಂಗತಿಗಳು ನಮಗೆ ಚಿಕ್ಕದಾಗಿ ಕಾಣುತ್ತವೆ, ಆದರೆ ಥೈಲ್ಯಾಂಡ್ ದೇಶ ಸುತ್ತಾಡಿದರೆ ಇಂಥ ಅನೇಕ ಸಂಗತಿಗಳು ಗಮನ ಸೆಳೆಯುತ್ತವೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications