ಬ್ರಹ್ಮೋತ್ಸವದಲ್ಲಿ ತಿರುಪತಿ ಆದಾಯ ಕಮ್ಮಿ !!

ಈ ಉತ್ಸವದ ವೇಳೆ ಸುಮಾರು ಏಳು ಲಕ್ಷ ಜನ ದೇವರ ದರ್ಶನ ಪಡೆದಿದ್ದರು. ಈ ಬಾರಿಯ ಬ್ರಹ್ಮೋತ್ಸವದ ವೇಳೆ ಹುಂಡಿಯಿಂದ 10.77 ಕೋಟಿ, ಲಡ್ಡು ಪ್ರಸಾದ ಮಾರಾಟದಿಂದ 1.16 ಕೋಟಿ ಮತ್ತು ದರ್ಶನ ಟಿಕೆಟ್ ನಿಂದ 14 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ಕೃಷ್ಣರಾವ್ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲ ಉಂಟಾಗಿರುವ ಆರ್ಥಿಕ ಕುಸಿತ ತಿಮ್ಮಪ್ಪನ ಮೇಲೆ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ಸಾಧ್ಯವಾದ ಮಟ್ಟಿಗೆ ಹಣ ಉಳಿಸುವ ನಿಟ್ಟಿನಲ್ಲಿ ಜನರು ಚಿಂತನೆ ನಡೆಸುತ್ತಿದ್ದಾರೆ. ಆರ್ಥಿಕ ಕುಸಿತ ಅಂತ್ಯ ಕಾಣಲಿ. ತಿಮ್ಮಪ್ಪನ ದರುಶನಕ್ಕೆ ನಂತರ ಹೋದರಾಯಿತು ಎನ್ನುವುದು ಅನೇಕ ಭಕ್ತರ ಅನಿಸಿಕೆಯಾಗಿದೆ.
(ಏಜನ್ಸೀಸ್)












Click it and Unblock the Notifications