ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಮೊಗ್ಗ : ಹ್ಯಾಂಡ್ ಬಾಲ್ ಆಟಗಾರರ ಆಯ್ಕೆ ಶಿಬಿರ
ಆಟಗಾರರ ಆಯ್ಕೆ ಈ ಶಿಬಿರಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ ಚಾಲನೆ ನೀಡಿದರು. ಪ್ರಾಂಶುಪಾಲ ಪ್ರೊ.ಎಚ್.ಎನ್.ದೇಶಪಾಂಡೆ, ಶಿಬಿರದ ಸಂಘಟಕರಾದ ದೈಹಿಕ ಶಿಕ್ಷಣ ನಿರ್ದೇಶಕಿ ಎ.ಎಲ್.ರುದ್ರಾಣಿ, ರಾಜ್ಯ ಹ್ಯಾಂಡ್ ಬಾಲ್ ತಂಡದ ಕೋಚ್ ವಸುಮತಿ, ಜಿಲ್ಲಾ ಹ್ಯಾಂಡ್ ಬಾಲ್ ಸಂಸ್ಥೆಯ ಕೋಚ್ ಲೋಕೇಶ್, ಡಾ.ಬಾಲಕೃಷ್ಣ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಾಸನ, ಮಂಗಳೂರು, ರಾಣೆಬೆನ್ನೂರು, ಶಿವಮೊಗ್ಗ, ಶಂಕರಘಟ್ಟ, ಹಾವೇರಿ, ಧಾರವಾಡ, ಮಡಿಕೇರಿ, ಬಾಗಲಕೋಟ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಮುಂತಾದೆಡೆಗಳಿಂದ ಸುಮಾರು 30 ಕ್ರೀಡಾ ಪಟುಗಳು ಈ ಆಯ್ಕೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, September 29, 2009, 15:07 [IST]