ಬಿಜಾಪುರದಲ್ಲಿ ಸಿಎಂ ಹೆಲಿಕಾಪ್ಟರ್ ಓಲಾಟ
ವಿಜಾಪುರ,
ಸೆ. 25 : ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಿಜೋಳ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಆಕಾಶಕ್ಕೆ ಏರುವಾಗ ವಿಚಿತ್ರ ರೀತಿಯಲ್ಲಿ ವರ್ತಿಸಿ ನೆರೆದಿದ್ದ ಜನ ಮತ್ತು ಸಿಎಂ ಬಳಗವನ್ನು ಕಕ್ಕಾಬಿಕ್ಕಿಯಾಗಿಸಿದೆ. ಹೆಲಿಕಾಪ್ಟರ್ ಮೇಲಕ್ಕೇರುವ ಬದಲು (ಟೇಕ್ ಆಫ್) ಹಿಂದಕ್ಕೆ ಚಲಿಸಿದ್ದರಿಂದ ಎಲ್ಲರೂ ಆತಂಕಗೊಂಡ ಘಟನೆ ಇಲ್ಲಿಯ ಸೈನಿಕ ಶಾಲೆಯ ಹೆಲಿಪ್ಯಾಡ್ನಲ್ಲಿ ನಡೆದಿದೆ. id="toptextpromo">ಮುಖ್ಯಮಂತ್ರಿಗಳು
ಬಾಗಲಕೋಟೆಗೆ ತೆರಳಲು ಹೆಲಿಕಾಪ್ಟರ್ ಹತ್ತಿದರು. ಆದರೆ, ಚಕ್ರಗಳನ್ನು ಹೊಂದಿದ್ದ ಹೆಲಿಕಾಪ್ಟರ್ ಟೇಕ್ಆಫ್ ಆಗುವ ಬದಲು ಸುಮಾರು 100 ಅಡಿ ಹಿಂದಕ್ಕೆ ಚಲಿಸಿತು. ಸ್ವಲ್ಪದರಲ್ಲಿಯೇ ಹಿಂದೆ ಇದ್ದ ಜೀಪಿಗೆ ಅಪ್ಪಳಿಸುವುದು ತಪ್ಪಿತು. ಫ್ಯಾನ್ ತಿರುಗುತ್ತಲೇ ಇತ್ತು. ಹೆಲಿಕಾಪ್ಟರ್ ವಾಲಲಾರಂಭಿಸಿತು. ಇದನ್ನು ಕಂಡ ಅಲ್ಲಿಯ ಜನ ಹಾಗೂ ಅಧಿಕಾರಿಗಳು ಗಾಬರಿಯಾದರು. ಕೊನೆಗೂ ಸುಮಾರು 15 ನಿಮಿಷಗಳ ಕಾಲ ಹರಸಾಹಸ ನಡೆಸಿ ಕೊನೆಗೂ ಹೆಲಿಕಾಪ್ಟರ್ ಟೇಕ್ಆಫ್ ಆಯಿತು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications