Get Updates
Get notified of breaking news, exclusive insights, and must-see stories!

ಉಡುಪಿಗೆ ಬನ್ನಿ,ಸೇನೆಗೆ ಭರ್ತಿಯಾಗಿರಿ

Indian Soldier
ಮಡಿಕೇರಿ, ಸೆ. 22 :ಉದ್ಯೋಗ, ವೃತ್ತಿ ಮತ್ತು ಸೇವೆಗೆ ಒಂದೇ ಹೆಸರಾಗಿರುವ ಭಾರತೀಯ ಸೇನೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಯುವಕರು ಮುಂದಾಗಬೇಕೆಂದು ಡೆಪ್ಯೂಟಿ ಡೈರೆಕ್ಟರ್ ಜನರಲ್ ( ರೆಕ್ರೂಟ್ ಮೆಂಟ್) ಬ್ರಿಗೇಡಿಯರ್ ಜೆ. ಸಿ. ಕುಶಾಲಪ್ಪ ಕರೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಒಂದು ಅನೌಪಚಾರಿಕ ಸಂವಾದದ ನಂತರ ಕುಶಾಲಪ್ಪ ಅವರು ಮಾಧ್ಯಮಗಳಿಗೆ ಬಿಡುಗಡೆಗೆ ಮಾಡಿದ ಒಂದು ಮಾಹಿತಿ ಪತ್ರದಲ್ಲಿ ಸೇನೆಗೆ ಯುವಕರ ಭರ್ತಿ ಕುರಿತ ಕೆಲವು ಮಾಹಿತಿಗಳನ್ನು ಹಂಚಿಕೊಂಡರು. ಮುಖ್ಯವಾಗಿ, ವೀರಯೋಧರಿಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಸೇನೆಗೆ ಸೇರಬಯಸುವವರ ಸಂಖ್ಯೆ ದಿನೇದಿನೇ ಕಡಿಮೆ ಆಗುತ್ತಿದೆಯಂತೆ. ಕಳೆದ ವರ್ಷ ಜಿಲ್ಲೆಯಿಂದ ಸೇನೆಗೆ ಭರ್ತಿಯಾದವರ ಸಂಖ್ಯೆ ಕೇವಲ 45 ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸೇನೆಗೆ ಸೇರಬಯಯುವ ಯುವಕರು ಮೊದಲು ತಮ್ಮ ದೇಹಧಾರ್ಢ್ಯದ ಕಡೆಗೆ ಗಮನ ಕೊಡಬೇಕು. ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ಶ್ರದ್ಧೆಯಿಂದ ಸಿದ್ಧರಾಗಬೇಕು. ಸೇನೆಗೆ ಭಾವಿ ಸೈನಿಕರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ತೆರಳಿ ಸೇನೆಗೆ ಸೇರ್ಪಡೆ ಕುರಿತ ಪ್ರತಿಯೊಂದು ಮಾಹಿತಿಯನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಸೇನೆಗೆ ನೇಮಕಾತಿ ನಡೆಯುವ ಮುಂದಿನ ಪರೀಕ್ಷೆಗಳು ಇದೇ ನವೆಂಬರ್ 12 ರಿಂದ 16 ವರೆಗೆ ಉಡುಪಿಯಲ್ಲಿ ನಡೆಯಲಿವೆ. ಯುವಕರು ತಮ್ಮ ತಮ್ಮ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರಗಳಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಒಟ್ಟು ಒಂಬತ್ತು ಜಿಲ್ಲೆಯ ಉದ್ಯೋಗಾಭಿಲಾಷಿಗಳಿಗೆ ಉಡುಪಿಯಲ್ಲಿ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಆಯೋಜಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+