ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಎಲ್ : ಮಲ್ನಾಡ್ ತಂಡ ಕೂಟದಿಂದ ಹೊರಕ್ಕೆ

By Staff
|
Google Oneindia Kannada News

KPL
ಬೆಂಗಳೂರು, ಸೆ. 18 : ಮಂತ್ರಿ ಕೆಪಿಎಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆರು ಪಂದ್ಯಗಳನ್ನಾಡಿ ಐದರಲ್ಲಿ ಸೋಲು ಅನುಭವಿಸುವ ಮೂಲಕ ಮಲ್ನಾಡ್ ಗ್ಲೇಡಿಯೇಟರ್ಸ್ ತಂಡ ಸ್ಪರ್ಧಾ ಕಣದಿಂದ ಹೊರಬಿದ್ದಿದೆ. ಗುರುವಾರ (ಸೆ 17 ) ನಡೆದ ಇನ್ನೊದು ಪಂದ್ಯದಲ್ಲಿ ಬೆಂಗಳೂರು ಪ್ರಾವಿಡೆಂಟ್ ತಂಡ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಎರಡನೇ ಪಂದ್ಯದಲ್ಲಿ ಮಳೆಯ ಕಾರಣ ಪಂದ್ಯವನ್ನು 15ಓವರ್ ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಾವಣಗೆರೆ ಡೈಮ೦ಡ್ಸ್ ತಂಡ 7.1 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 52 ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಯಾಯಿತು. ವಿಜೆಡಿ ನಿಯಮದ ಪ್ರಕಾರ ಮಲ್ನಾಡ್ ತಂಡಕ್ಕೆ ಐದು ಓವರ್ ಗಳಲ್ಲಿ 44 ರನ್ ಗುರಿ ನೀಡಲಾಯಿತು. ಆದರೆ ಮಲ್ನಾಡ್ ತಂಡ ನಿಗದಿತ ಓವರ್ ಗಳಲ್ಲಿ 36 ರನ್ ಗಳಿಸಲಷ್ಟೇ ಶಕ್ತವಾಗಿ 16 ರನ್ ಗಳಿಂದ ಸೋತು ಕೂಟದಿಂದ ನಿರ್ಗಮಿಸಿತು. ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ದಾವಣಗೆರೆ ತಂಡದ ಮಾಯಾಂಕ್ ಅಗರವಾಲ್ ಪಡೆದರು.

ಇನೂಂದು ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 116 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ಪ್ರಾವಿಡೆಂಟ್ ತಂಡ ನಾಯಕ ಅಖಿಲ್ ಅವರ ಉತ್ತಮ ಆಟದಿಂದ (34) ಐದು ವಿಕೆಟ್ ಗಳ ಜಯ ಸಾಧಿಸಿತು. ಪ್ರಾವಿಡೆಂಟ್ ತಂಡದ ನಾಯಕ ಬಾಲಚಂದ್ರ ಅಖಿಲ್ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದರು.

ಇಂದಿನ ಪಂದ್ಯ : ಬೆಂಗಳೂರು ಬ್ರಿಗೇಡಿಯರ್ಸ್ Vs ಮೈಸೂರು ಮಹಾರಾಜಾಸ್ (ಬೆಳಗ್ಗೆ 10 ಗಂಟೆಗೆ)
ಮಂಗಳೂರು ಯುನೈಟೆಡ್ Vs ಬಿಜಾಪುರ ಬುಲ್ಸ್ (ಮಧ್ಯಾಹ್ನ 1.45ಕ್ಕೆ )
ಪಂದ್ಯ ನಡೆಯುವ ಸ್ಥಳ : ಮಾನಸ ಗಂಗೋತ್ರಿ ಮೈದಾನ, ಮೈಸೂರು

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X