ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ವಿರುದ್ಧ ಮಾನಹಾನಿ ಕೇಸು : ದೇಶಪಾಂಡೆ

By Staff
|
Google Oneindia Kannada News

RV Deshapande
ಬೆಂಗಳೂರು, ಸೆ. 14 : ಸರಕಾರ ಅಭದ್ರಗೊಳಿಸಲು ಕಾಂಗ್ರೆಸ್ ಸಂಚು ನಡೆಸುತ್ತಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಕ್ಕೆ ಕೆಪಿಸಿಸಿ ಕೆಂಡಾಮಂಡಲವಾಗಿದೆ. ಮುಖ್ಯಮಂತ್ರಿಗಳ ಆಧಾರ ರಹಿತ ಹೇಳಿಕೆಗಳು ಮುಂದುವರೆದರೆ ಅವರ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುವಂತೆ ಮಾಡಿ ಸರಕಾರದ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿದೆ ಎಂದು ಸಿಎಂ ಭಾನುವಾರ ಶಿವಮೊಗ್ಗದಲ್ಲಿ ಹೇಳಿದ್ದರು. ನಮ್ಮ ಪಕ್ಷದ ಕೈವಾಡವಿಲ್ಲ. ಬೇಕಿದ್ದರೆ ಸರಕಾರ ಸಿಬಿಐ ತನಿಖೆ ಮಾಡಸಲಿ ಎಂದು ಸವಾಲು ಹಾಕಿದರು. ವೀರೇಂದ್ರ ಪಾಟೀಲ್ ಸರಕಾರ ತೆಗೆದಂತೆ ನಮ್ಮ ಸರಕಾರ ತೆಗೆಯಲು ಸಂಚು ನಡೆದಿದೆ ಎಂಬುದನ್ನು ಅಸಮಾಧಾನ ವ್ಯಕ್ತಪಡಿಸಿದ ದೇಶಪಾಂಡೆ, ಪಾಟೀಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಟ್ಟಿದ್ದರು. ಕೋಮುಗಲಭೆಯಿಂದಲ್ಲ. ಇಷ್ಟಕ್ಕೂ ಅದು ಕಾಂಗ್ರೆಸ್ ಆಂತರಿಕ ವಿಚಾರ ಎಂದು ಕಿಡಿಕಾರಿದರು.

ಕಾನೂನು ಸುವ್ಯವಸ್ಥೆ ಹಾಳಾಗಲು ಕಾಂಗ್ರೆಸ್ ಸಂಚು ರೂಪಿಸಿ ಸರಕಾರದ ಮೇಲೆ ಗೂಬೆ ಕೂರಿಸಿದೆ ಎಂಬ ಹೇಳಿಕೆಗೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ಬಹಿರಂಗಪಡಿಸಿ, ಇಲ್ಲವೇ ಸಿಬಿಐ ತನಿಖೆಗೆ ವಹಿಸಿ ಎಂದು ಅವರು ಪ್ರತಿ ಸವಾಲು ಹಾಕಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X