ಲಿಖಿತ ಭರವಸೆ ಕೊಡಿ, ವೈದ್ಯರ ಮನವಿ

ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಸಚಿವ ಶ್ರೀರಾಮುಲು ಜೊತೆಗಿನ ಮಾತುಕತೆ ಆಶಾದಾಯಕವಾಗಿತ್ತು. ತಮ್ಮ ಸಂಘದ ನ್ಯಾಯಯುತ ಬೇಡಿಕೆಗಳ ಈಡೇರಿಸುವ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು. ಆದರೆ, ಬೇಡಿಕೆಗಳು ಈಡೇರಿಕೆ ಕುರಿತು ಲಿಖಿತ ಭರವಸೆ ದೊರೆತರೆ ಮಾತ್ರ ಹೋರಾಟದಿಂದ ಹಿಂದೆ ಸರಿಯಲಾಗುವುದು ಇಲ್ಲದಿದ್ದರೆ ಸೆ. 19 ರಿಂದ ಮುಷ್ಕರ, ಸಾಮೊಹಿಕ ರಾಜೀನಾಮೆ ನೀಡುವುದು ಖಚಿತ ಎಂದು ಸ್ಪಷ್ಟಪಡಿಸಿದರು.
ಕಳೆದ ವರ್ಷ ವೈದ್ಯರು ಮುಷ್ಕರ ಆರಂಭಿಸಿದಾಗ ಸಚಿವ ವಿ ಎಸ್ ಆಚಾರ್ಯ ನೇತೃತ್ವದ ಸಮಿತಿ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. 10 ತಿಂಗಳು ಮುಗಿಯುತ್ತಾ ಬಂದರೂ ಯಾವುದೇ ಬೇಡಿಕೆಗಳ ಈಡೇರಿಸಲು ಸರಕಾರ ಮುಂದಾಗದಿರುವುದು ವೈದ್ಯರಿಗೆ ಬೇಸರ ತರಿಸಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications