ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗದಗದಲ್ಲಿ 76ನೇ ಕನ್ನಡ ಸಾಹಿತ್ಯ ಸಮ್ಮೇಳನ
ಜಿಲ್ಲಾಡಳಿತ ಭವನದಲ್ಲಿ ನಡೆದ ಸಮ್ಮೇಳನದ ಸ್ವಾಗತ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಅವರು ಇದನ್ನು ಪ್ರಕಟಿಸಿದರು. ನವೆಂಬರ್ ನಲ್ಲಿಯೇ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಕಸಾಪ ಪದಾಧಿಕಾರಿಗಳು ನಿರ್ಣಯಿಸಿದ್ದರು. ಆದರೆ, ನವೆಂಬರ್ ನಲ್ಲಿ ಹೆಚ್ಚು ಮದುವೆ, ಪದವಿ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಕಸಾಪ ಜಿಲ್ಲಾ ಘಟಕ ಸಲ್ಲಿಸಿದ ಮನವಿಯಂತೆ ಡಿಸೆಂಬರ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಒಂದೇ ರೀತಿಯ ಉಟದ ವ್ಯವಸ್ಥ ಕಲ್ಪಿಸಬೇಕು. ವಸತಿ ಸಮಸ್ಯೆ ಎದುರಾಗದಂತೆ ಹಾಗೂ ಸಮ್ಮೇಳನವು ಜನಸಾಮಾನ್ಯರ ಸಮ್ಮೇಳನವಾಗಿ ಹೊರಹೊಮ್ಮುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಶ್ರೀಶೈಲಪ್ಪ ಬಿದರೂರ್. ರಾಮಣ್ಣ ಲಮಾಣಿ, ಶಿವರಾಜ ಸಜ್ಜನರ, ಕಸಾಪ ಜಿಲ್ಲಾಧ್ಯಕ್ಷ ಎ ಬಿ ಹಿರೇಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)
Comments
ಕನ್ನಡ ಸಾಹಿತ್ಯ ಪರಿಷತ್ nallur prasad gadag ಗದಗ ನಲ್ಲೂರು ಪ್ರಸಾದ್ ಕನ್ನಡ ಸಮ್ಮೇಳನ kannada meet kannada sahitya parishat
Story first published: Monday, September 14, 2009, 10:23 [IST]