ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಪಿಎಲ್ ಚೀಟಿದಾರರಿಗೆ ಆಹಾರಧಾನ್ಯ ಬಿಡುಗಡೆ
ಬೆಂಗಳೂರು, ಸೆ.12: ಬೆಂಗಳೂರು ನಗರ ಜಿಲ್ಲೆಗೆ ಸಾರ್ವಜನಿಕ ವಿರತಣಾ ವ್ಯವಸ್ಥೆಯಡಿ ಅಂತ್ಯೋದಯ ಮತ್ತು ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ಸೆಪ್ಟೆಂಬರ್ ಮಾಹೆಯಲ್ಲಿ ವಿತರಿಸಲು ಆಹಾರ ಧಾನ್ಯವನ್ನು ಬಿಡುಗಡೆ ಮಾಡಲಾಗಿದೆ.
ಅಂತ್ಯೋದಯ ಪಡಿತರ ಚೀಟಿದಾರರಿಗೆ ತಲಾ 29 ಕೆ.ಜಿ. ಅಕ್ಕಿ, ಹಾಗೂ 6 ಕೆ.ಜಿ. ಗೋದಿಯಂತೆ ವಿತರಿಸಲು 4600 ಕ್ವಿಂಟಾಲ್ ಅಕ್ಕಿ, ಮತ್ತು 1000 ಕ್ವಿಂಟಾಲ್ ಗೋದಿ ಹಾಗೂ ಬಿಪಿಎಲ್ ಪಡಿತರದಾರರಿಗೆ ಯೂನಿಟ್ ಒಂದಕ್ಕೆ 4 ಕೆ. ಜಿ. ಅಕ್ಕಿ, 1 ಕೆ.ಜಿ. ಗೋದಿಯಂತೆ ಗರಿಷ್ಠ 20 ಕೆ.ಜಿ. ಅಕ್ಕಿ, 3 ಕೆ.ಜಿ. ಗೋದಿ ವಿತರಿಸಲು ಒಟ್ಟು 41940 ಕ್ವಿಂಟಾಲ್ ಅಕ್ಕಿ ಹಾಗೂ 7150 ಗೋದಿ ಬಿಡುಗಡೆ ಮಾಡಲಾಗಿದೆ.
ಬಿಪಿಎಲ್ ಚೀಟಿದಾರರಿಗೆ ಅಕ್ಕಿ ಹಾಗೂ ಗೋದಿ, ಕೆಜಿಗೆ 3 ರೂ ಗಳಂತೆ, ಅಂತ್ಯೋದಯ ಫಲಾನುಭವಿಗಳಿಗೆ ಅಕ್ಕಿ ಕೆಜಿಗೆ 3 ರೂ ಹಾಗೂ ಗೋದಿ 2 ರೂ ಗಳಂತೆ ಲಭ್ಯವಿರುವುದೆಂದು ಆಹಾರ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, September 12, 2009, 16:57 [IST]